ಕಡೇ ಶನಿವಾರದ ಶಿವನಾರದಮುನಿ ಸ್ವಾಮಿ ವಿಶೇಷ ಪೂಜೆ

ಕಡೇ ಶನಿವಾರದ ಶಿವನಾರದಮುನಿ ಸ್ವಾಮಿ ವಿಶೇಷ ಪೂಜೆ

ದಾವಣಗೆರೆ, ಆ. 28 – ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲ್ಲೂಕು, ಚಿಗಟೇರಿ ಗ್ರಾಮದ  ಶಿವನಾರದಮುನಿ ಸ್ವಾಮಿಯ ಕಡೇ ಶ್ರಾವಣ ಶನಿವಾರದ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ದಿನಾಂಕ 31.8.2024ರ ಶನಿವಾರದಂದು ಏರ್ಪಡಿಸಲಾಗಿದೆ.

ದಿ. 31.8.2024ರ ಶನಿವಾರದಂದು ಬೆಳಿಗ್ಗೆ 5 ರಿಂದ 6 ರವರೆಗೆ ರುದ್ರಾಭಿಷೇಕ, ನಂತರ ಹೊಸ ಮಡಿ ವಿಶೇಷ, ಹೂವಿನ ಅಲಂಕಾರದೊಂದಿಗೆ ವಿಶೇಷ ಪೂಜೆಯು ಬೆಳಿಗ್ಗೆ 9 ರಿಂದ 10 ರವರೆಗೆ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಪ್ರಧಾನ ಅರ್ಚಕರಿಂದ ಮಹಾಮಂಗಳಾರತಿಯೊಂದಿಗೆ ವಿಶೇಷ ಪೂಜೆ ನೆರವೇರುವುದು. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಸುಮಾರು 25 ಸಾವಿರ ಜನರಿಗೆ ಪ್ರಸಾದದ ವ್ಯವಸ್ಥೆಯನ್ನು ದೇವಸ್ಥಾನ ಸಮಿತಿಯ ವತಿಯಿಂದ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ. 

ಸರ್ವ ಭಕ್ತಾದಿಗಳು ಆಗಮಿಸಿ, ಸ್ವಾಮಿಯ ಕೃಪೆಗೆ ಪಾತ್ರರಾಗಿ ದರ್ಶನಾಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಬೇಕೆಂದು ಶ್ರೀ ಶಿವನಾರದಮುನಿ ದೇವಸ್ಥಾನ ಸಮಿತಿಯ ಸಂಸ್ಥಾಪಕ ಅಧ್ಯಕ್ಷ
ಶ್ರೀ ಅಣಬೇರು ರಾಜಣ್ಣ,
ಟ್ರಸ್ಟ್ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ.

error: Content is protected !!