ಗ್ರಾ. ಪಂ.ನಲ್ಲೇ ಮಲಗಿ ವಿನೂತನ ಪ್ರತಿಭಟನೆ

ಗ್ರಾ. ಪಂ.ನಲ್ಲೇ ಮಲಗಿ ವಿನೂತನ ಪ್ರತಿಭಟನೆ

ಪೈಪ್‌ಲೈನ್‌ ರಿಪೇರಿ ಮಾಡಿದ ಕೆಲಸಕ್ಕೆ ಹಣ ಕೊಡದೇ ಸತಾಯಿಸುತ್ತಿರುವ ಪಿಡಿಒ ವಿರುದ್ಧ ಖಂಡಿಸಿದ ಸದಸ್ಯ

ಕೊಟ್ಟೂರು, ಜು. 26 – ತಾಲ್ಲೂಕಿನ ಉಜ್ಜಿನಿ ಗ್ರಾಮ ಪಂಚಾಯತಿಯ ಬೈರದೇವರ ಗುಡ್ಡದ ಸದಸ್ಯ ಚಂದ್ರಪ್ಪ ಪೈಪ್‌ಲೈನ್‌ ರಿಪೇರಿ ಮಾಡಿದ ಕೆಲಸಕ್ಕೆ ಹಣ ಕೊಡದೇ ಸತಾಯಿಸುತ್ತಿರುವ ಪಿಡಿಒ ಜಯಮ್ಮನವರ ವಿರುದ್ಧ ಗ್ರಾಮ ಪಂಚಾಯತಿಯಲ್ಲೆ ಹಾಸಿಗೆ ಸಮೇತ ಮಲಗಿ ವಿನೂತನವಾಗಿ ಪ್ರತಿಭಟಿಸಿದ್ದಾರೆ.

ಗ್ರಾಮ ಪಂಚಾಯತಿ ಸದಸ್ಯ ಚಂದ್ರಪ್ಪ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಹಣದ ಕೊರತೆಯಾಗಿ ಆಸ್ಪತ್ರೆಗೆ ತೋರಿಸಲು ಹಣ ಬೇಕಾಗಿದೆ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಸಹ ಕೊಡುತ್ತಿಲ್ಲವೆಂದು ಪಿಡಿಓ ವಿರುದ್ದ ದೂರಿದರು.

ಚಳಿ ಜ್ವರ ಬಂದು ಚಂದ್ರಪ್ಪ ಪಂಚಾಯತಿಯಲ್ಲಿ ಮಲಗಿಕೊಂಡಿದ್ದನ್ನು ಕಂಡ ಮಾಜಿ ಅಧ್ಯಕ್ಷರು, ಅವರನ್ನು ಮಾತನಾಡಿಸಿ ವಿಚಾರಿಸಿದಾಗ ನಾನು ವರ್ಗ 1 ರಲ್ಲಿ 12 ಸಾವಿರ ಮೊತ್ತದ ಪೈಪ್ ಲೈನ್ ಕೆಲಸ ಮಾಡಿದ್ದು ನಾಲ್ಕು ತಿಂಗಳುಗಳಿಂದ ಹಣ ನೀಡಲು ಪಿಡಿಒ ರವರು ಸತಾಯಿಸುತ್ತಿದ್ದಾರೆ. ನಾನು ಅನಾರೋಗ್ಯದಿಂದ ಬಳಲುತ್ತಿದ್ದು  ಚಿಕಿತ್ಸೆ ಅನಿವಾರ್ಯ ಇದೆ.  ಪಿಡಿಓ ಗಮನಕ್ಕೆ ಇದ್ದರೂ ನನಗೆ ಹಣ ಪಾವತಿ ಮಾಡುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ರವಿ, ಕುರುಗೋಡು ಸಿದ್ದೇಶ ಗ್ರಾಮ ಪಂಚಾಯತಿ ಸದಸ್ಯರು ಇದ್ದರು.

 ಗ್ರಾಮ ಪಂಚಾಯತಿಯಲ್ಲಿ  ಗ್ರಾ.ಪಂ. ಸದಸ್ಯ ಚಂದ್ರಪ್ಪ ಹಾಸಿಗೆ ಸಮೇತ ಮಲಗಿ ವಿನೂತನವಾಗಿ ಪ್ರತಿಭಟಿಸುವುದು. ಈ ವಿಷಯವಾಗಿ ಪರಿಶೀಲನೆ ಮಾಡಿಸಿ, ಅಧಿಕಾರಿಗಳ ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕರು ತಿಳಸಿದ್ದಾರೆ.

error: Content is protected !!