ವಿವೇಕಾನಂದ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

ವಿವೇಕಾನಂದ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

ದಾವಣಗೆರೆ, ಜು.18- ಇಲ್ಲಿನ ಬನಶಂಕರಿ ಬಡಾವಣೆಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಈಚೆಗೆ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜ್ಞಾನ ಭಾರತಿ ವಿದ್ಯಾಲಯದ ಕಾರ್ಯದರ್ಶಿ ಎಂ.ಎನ್. ಮಲ್ಲೇಶಪ್ಪ ಶ್ಯಾಗಲೆ ಅವರು ಮಾತನಾಡಿ, ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾಗಿರುವ ಮಕ್ಕಳು, ಧರ್ಮ-ಜಾತಿ, ಮತ-ಪಂಥ ಮತ್ತು ಲಿಂಗ ಭೇದ ಮಾಡದೆ, ಎಲ್ಲರನ್ನು ಒಗ್ಗೂಡಿಸಿ ಈ ಶೈಕ್ಷಣಿಕ ಸಾಲಿನ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಶ್ರಮಿಸಬೇಕು ಎಂದು ತಿಳಿಸಿದರು. 

ನಿಸರ್ಗ ಶಾಲೆಯ ಕಾರ್ಯದರ್ಶಿ ಎಚ್‌.ಜಿ. ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಗುರು-ಹಿರಿಯರಿಗೆ ಮತ್ತು ತಂದೆ-ತಾಯಿಗಳಿಗೆ ಸದಾ ಗೌರವಿಸಬೇಕು ಮತ್ತು ಶಾಲೆಯಲ್ಲಿ ಶಿಸ್ತಿನ ವಿದ್ಯಾಭ್ಯಾಸ ಮಾಡುವಂತೆ ಹೇಳಿದರು.

ಕೆ.ಎನ್‌. ರಾಜಶೇಖರ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.ಮುಖ್ಯಶಿಕ್ಷಕ ಬಿ. ಪರಮೇಶ್ವರಪ್ಪ, ಶಿಕ್ಷಕ ಟಿ. ಕಲ್ಲೇಶ್,  ಪಿ.ಎಸ್‌ ತಾರಾ, ಮಂಜುಳಾ, ಪವಿತ್ರಾ, ನೇತ್ರಾ, ಎನ್‌.ದಿವ್ಯಾ ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿದ್ದರು.

error: Content is protected !!