ಬುಡಕಟ್ಟು ಮಹಿಳೆಯರಿಗೆ ಕ್ರೀಡಾಕೂಟ

ಬುಡಕಟ್ಟು ಮಹಿಳೆಯರಿಗೆ ಕ್ರೀಡಾಕೂಟ

ದಾವಣಗೆರೆ, ಜು. 7- ಮಾತೃಶ್ರೀ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಬದಿಯನಾಯ್ಕನ  ತಾಂಡಾದಲ್ಲಿ ಬುಡಕಟ್ಟು ಸಮು ದಾಯದ ಮಹಿಳೆಯರಿಗೆ  ಕ್ರೀಡಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಮಂಜಮ್ಮ ಹಾಗೂ ಸದಸ್ಯರಾದ ನಾಗರತ್ನಮ್ಮ ಉಪಸ್ಥಿತರಿದ್ದರು. ಮಾತೃಶ್ರೀ ಸಂಸ್ಥೆಯ ಮುಖ್ಯಸ್ಥ ಕಿರಣ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಹಿಳಾ ಸಬಲೀಕರಣ ಅಗತ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಲಕ್ಷ್ಮಿ, ಕುಮಾರಸ್ವಾಮಿ, ಯೋಗೇಶ್  ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!