ಭೂ ಫಲವತ್ತತೆ ಕುಗ್ಗಲು ರಾಸಾಯನಿಕ ಬಳಕೆ ಕಾರಣ

ಭೂ ಫಲವತ್ತತೆ ಕುಗ್ಗಲು ರಾಸಾಯನಿಕ ಬಳಕೆ ಕಾರಣ

ದಾವಣಗೆರೆ, ಮೇ 8 – ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಸಿದರೆ ಭೂಮಿಯ ಫಲವತ್ತತೆ ಕುಗ್ಗುವ ಜತೆಗೆ ಪರಿಸರದಲ್ಲಿನ ಉಪಯುಕ್ತ ಕೀಟಗಳ ಸಂತತಿ ನಾಶವಾಗುತ್ತದೆ ಎಂದು ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ತಿಳಿಸಿದರು.

ಜಗಳೂರು ತಾಲ್ಲೂಕು ಕಲ್ಲೇದೇವರಪುರದಲ್ಲಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಇವರ ವತಿಯಿಂದ ಬುಧವಾರ ನಡೆದ ಕೃಷಿಯಲ್ಲಿ ಜೈವಿಕ ನಿಯಂತ್ರಣ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿಗೆ ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮಾ, ಸುಡೋಮೊನಾಸ್, ರೈಜೋಬಿಯಂಗಳನ್ನು ಬೀಜೋಪಚಾರದ ಜೊತೆಗೆ ಬಳಸಬಹುದು ಮತ್ತು ಮೋಹಕ ಬೆಲೆ ಹಾಗೂ ಈ ಬಲೆಗಳನ್ನು ತರಕಾರಿ ಬೆಳೆಗಳಲ್ಲಿ ಉಪಯೋಗಿಸುವುದರಿಂದ ಪರಿಸರ ನಿಯಂತ್ರಣ ಸಾಧ್ಯ ಎಂದರು.

ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಟಿ.ಜಿ. ಅವಿನಾಶ್ ಮಾತನಾಡಿ, ಹತ್ತಿ ಮತ್ತು ಮೆಕ್ಕೆಜೋಳಗಳಲ್ಲಿ ಟ್ರೈಕೋಕಾರ್ಡ್ ಮೊಟ್ಟೆಗಳ ಚೀಟಿ ಕಟ್ಟುವುದರಿಂದ ಮೆಕ್ಕೆಜೋಳದಲ್ಲಿ ಲದ್ಧಿ ಹುಳದ ನಿಯಂತ್ರಣ ಹಾಗೂ ಹತ್ತಿಯಲ್ಲಿ ಕಾಯಿಕೊರಕದ ನಿಯಂತ್ರಣವನ್ನು ಜೈವಿಕ ವಿಧಾನದಿಂದ ಮಾಡಬಹುದು ಎಂದು ತಿಳಿಸಿದರು.

ಟ್ರೈಕೋಕಾರ್ಡ್ ಚೀಟಿ ಪದ್ಧತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು.

ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಕೃಷ್ಣಮೂರ್ತಿ ಮತ್ತು 20ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿದ್ದರು.

error: Content is protected !!