ಚಿಗಟೇರಿ, ಏ. 28- ಇತಿಹಾಸ ಪ್ರಸಿದ್ಧ ಚಿಗಟೇರಿ ನಾರದಮುನಿ ರಥೋತ್ಸವವು ಭಾನುವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ, ನಗರ ಪಾಲಿಕೆ ಮಾಜಿ ಸದಸ್ಯ ಸಂಕೋಳ್ ಚಂದ್ರಶೇಖರ್, ಸದಸ್ಯರಾದ ವೊಡ್ಡಿನಳ್ಳಿ ಷಡಕಣ್ಣ, ಎಲೆಬೇತೂರು ಕರಿಬಸಪ್ಪ, ಕಲಪನಹಳ್ಳಿ ಬಸವಲಿಂಗಪ್ಪ, ಹೊಳಲ್ಕೆರೆ ವೇದಮೂರ್ತಿ, ಪಲ್ಲಾಗಟ್ಟೆ ನಾಗರಾಜ, ಚಿಗಟೇರಿ ದ್ಯಾಮನಗೌಡ, ಹನಗವಾಡಿ ಮಂಜಣ್ಣ, ಹುಲ್ಲೇಹಾಳ್ ನಾರಪ್ಪ, ಇಂಜಿನಿಯರ್ ಜಿ. ಬಿ. ಸುರೇಶ ಕುಮಾರ್, ನಾಗರಾಜ ಸಿರಿಗೆರೆ, ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜ, ಉಪಾಧ್ಯಕ್ಷರಾದ ಹಾಲಮ್ಮ ಮತ್ತು ಸದಸ್ಯರು, ಪಿಡಿಒ, ಸಿಬ್ಬಂದಿ, ಅರ್ಚಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
July 24, 2024