ಕೊಮಾರನಹಳ್ಳಿ : ಇಂದು ರುದ್ರಪಾರಾಯಣ

ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಸಭಾಭವನ ಮತ್ತು ಆಶ್ರಮದಲ್ಲಿ ಇಂದಿನಿಂದ ಇದೇ ದಿನಾಂಕ 22 ರವರೆಗೆ ಲೋಕ ಕಲ್ಯಾಣಾರ್ಥವಾಗಿ ಶ್ರೀಕಾಂತಾನಂದ ಭಗವಾನ್ ಸರಸ್ವತೀ ಮಹಾರಾಜರ ನೇತೃತ್ವದಲ್ಲಿ ಅತ್ಯಧಿಕ ಕೋಟಿ ರುದ್ರಯಾಗ ಸಮಿತಿ ವತಿಯಿಂದ ರುದ್ರಪಾರಾಯಣವನ್ನು ಹಮ್ಮಿಕೊಳ್ಳಲಾಗಿದೆ.

ಇಂದು ಬೆಳಿಗ್ಗೆ 6.30ಕ್ಕೆ ಮೊದಲ ಆವೃತ್ತಿ ರುದ್ರ ಪಾರಾಯಣದ ಮೂಲಕ 10 ದಿನಗಳ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ನಾಳೆ
ಶನಿವಾರ ಸಂಜೆ 7 ಗಂಟೆಗೆ ಖ್ಯಾತ ಚಿತ್ರನಟ
ಹಾಗೂ ಭರತನಾಟ್ಯ ಕಲಾವಿದರಾದ ಶ್ರೀಧರ್ ಅವರಿಂದ ಭರತನಾಟ್ಯ ಕಾರ್ಯಕ್ರಮ ಇರುತ್ತದೆ. ಭಾನುವಾರ ರುದ್ರಹೋಮ ಇರುತ್ತದೆ.

error: Content is protected !!