ದಾವಣಗೆರೆ, ಮಾ. 25- ನಗರದ ಎಸ್.ಎಸ್. ಬಡಾವಣೆ `ಎ’ ಬ್ಲಾಕ್ 8ನೇ ಕ್ರಾಸ್ನಲ್ಲಿ ವಚನಾಮೃತ ಬಳಗದಿಂದ ನೈಸರ್ಗಿಕವಾಗಿ ಹೋಳಿ ಹಬ್ಬವನ್ನು ಸೌಮ್ಯ ಸತೀಶ್ ಧಾರವಾಡ ಅವರ ನೇತೃತ್ವದಲ್ಲಿ ಆಚರಿಸಲಾಯಿತು. ವಿವಿಧ ಹಣ್ಣು ತರಕಾರಿ ಹಾಗೂ ದಾಸವಾಳದ ಎಲೆ, ಕರಿಬೇವು, ತುಳಸಿ, ಮೆಹಂದಿ ಸೊಪ್ಪು, ಇವೆಲ್ಲದರಿಂದ ಮಾಡಲ್ಪಟ್ಟ ಮಿಶ್ರಣವನ್ನು ಉಪಯೋಗಿಸಿ ಹೋಳಿ ಹಬ್ಬವನ್ನು ನೈಸರ್ಗಿಕವಾಗಿ ಪರಿಸರಕ್ಕೆ ಹಾಗೂ ತ್ವಚೆಗೂ ಯಾವುದೇ ರೀತಿಯ ತೊಂದರೆ ಉಂಟಾಗದ ರೀತಿ ಯಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಯಿತು.
ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಸುಮಾ ಪ್ರಸಾದ್, ದೀಪ ಜ್ಯೋತಿ, ಸುಮಾ, ಸರಿತಾ, ಕವಿತಾ, ಸುರೇಖಾ, ತನುಜ, ಸುಜಾತಾ, ಮಧು, ಮಂಗಳ, ಶಾಂತ, ಸುಮಾ ಬೇತೂರು, ಸಾವಿತ್ರ, ವಿಜಯ, ಶ್ರೇಯ ಶಿಲ್ಪ ವಿಜಯ, ಸರೋಜಾ ಸುಮಾ ಮತ್ತು ಇತರರು ಭಾಗವಹಿಸಿದ್ದರು.