ಹರಿಹರ, ಮಾ. 24 – ನಗರದಲ್ಲಿ ರತಿ ಮನ್ಮಥರಿಗೆ ವಿಶೇಷ ಪೂಜೆಯನ್ನು ಅರ್ಪಿಸಿ ಕಾಮದಹನ ಮಾಡುವ ಮೂಲಕ ರಂಗು ರಂಗಿನ ಹೋಳಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ಹೊಸಭರಂಪುರ ಬಡಾವಣೆ, ಹೈಸ್ಕೂಲ್ ಬಡಾವಣೆ, ಕೋಟೆ ಬಡಾವಣೆ, ವಿಜಯನಗರ, ವಿದ್ಯಾನಗರ, ಹರ್ಲಾಪುರ, ದೊಡ್ಡಿಬೀದಿ, ನಡವಲಪೇಟೆ, ಕೇಶವ ನಗರ, ಇಂದ್ರಾನಗರ, ಕಾಳಿದಾಸ ಬಡಾವಣೆ, ಬೆಂಕಿನಗರ, ಎಕೆ ಕಾಲೋನಿ ಸೇರಿದಂತೆ ಹಲವಾರು ಬಡಾವಣೆಯಲ್ಲಿ ರಾತ್ರಿ ರತಿ ಮನ್ಮಥ ಕಾಮ ದಹನ ಮಾಡಿದರು.
ಕಾಮ ದಹನ ಮಾಡುವ ಸಮಯದಲ್ಲಿ ರತಿ ಮನ್ಮಥ ನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಕಟ್ಟಿಗೆ, ಸೆಗಣಿಯ ಕುಳ್ಳು, ತಂದು ಕಾಮ ದಹನ ಮಾಡಿದರು. ಈ ವೇಳೆ ಮಕ್ಕಳು, ಕಾಮ್ಮಣ್ಣ ಮಕ್ಕಳೇ, ಕುಳ್ಳ ಕಟ್ಟಿಗೆ ಕದ್ದಿವೆ ಎಂದು ಬಾಯಿ ಬಡೆದುಕೊಂಡು ಕುಣಿದು ಕುಪ್ಪಳಿಸಿದರು.
ಈ ವೇಳೆ ಮಾರುತಿ, ಕಿಶೋರ್, ಪ್ರಥಮ್, ಪ್ರಜ್ವಲ್, ಕುಶಾಲ್, ವಿಷ್ಣು, ಮಹಾಂತೇಶ್, ಅಪ್ಪು, ಗುರುಪ್ರಸಾದ್, ಮಯೂರ್, ಪ್ರಕಾಶ್, ಹೊನ್ನಪ್ಪ, ಅರ್ಜುನ, ನರೇಂದ್ರ, ರಾಘವೇಂದ್ರ, ಅರ್ಷಿತಾ, ಅನ್ವಿತಾ, ಕೃತಿಕ, ಉಲ್ಲಾಸ್, ಶಿಕಾರಿ, ಪವನ್, ನವ್ಯ, ತನು, ಸಿದ್ದೇಶ್, ವೇದ, ಜನನಿ, ಜಾನು, ಇಂದೂ ಭವನಿ, ನಿವೇದಿತಾ, ನಯನಾ, ಸಂಚಿತ್ , ಅಂಜು, ವಿಜಯ, ಜಾನು, ಇತರರು ಹಾಜರಿದ್ದರು.