ಹರಿಹರ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಅದ್ಧೂರಿ ಮೆರವಣಿಗೆ

ಹರಿಹರ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಅದ್ಧೂರಿ ಮೆರವಣಿಗೆ

ಹರಿಹರ, ಮಾ.18- ನಗರದ ಸಿದ್ದೇಶ್ವರ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆದ 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ತಹಶೀಲ್ದಾರ್ ಗುರುಬಸವರಾಜ್ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಡೊಳ್ಳು, ಹಗಲು ವೇಷ, ಗೊಂಬೆ, ಕಹಳೆ ವಾದನ, ಸಮಾಳ, ಧರ್ಮಸ್ಥಳ ಸಂಘದ ಮಹಿಳೆಯರೂ ತಂಡ ಹಾಗೂ ಅಂಗನವಾಡಿ ಶಿಕ್ಷಕಿಯರು ಸೇರಿದಂತೆ ಇತರೆ ಕಲಾ ಮೇಳಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ನೀಡಿದವು. ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷರಾದ ಸಿ.ವಿ. ಪಾಟೀಲ್ ಮತ್ತು ಜಿಲ್ಲಾ ಕಸಾಪ ಅಧ್ಯಕ್ಷ  ಬಿ.ವಾಮದೇವಪ್ಪ ಉಪಸ್ಥಿತರಿದ್ದರು.  ಮೆರವಣಿಗೆಯಲ್ಲಿ  ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷ ಯುಗ ಧರ್ಮ ರಾಮಣ್ಣ ಭಾಗವಹಿಸಿದ್ದರು.

ದಾವಣಗೆರೆ ಕಸಾಪ ಅಧ್ಯಕ್ಷೆ ಸುಮತಿ ಜಯ್ಯಪ್ಪ, ರುದ್ರಾಕ್ಷಿಬಾಯಿ ಮತ್ತು ಕಸಾಪ ಪದಾಧಿಕಾರಿಗಳು ಕಲಾ ಮೇಳಗಳ ತಾಳಕ್ಕೆ ತಕ್ಕಂತೆ ಕುಣಿಯುವ ಮೂಲಕ ಮೆರವಣಿಗೆಗೆ ರಂಗು ತಂದರು.

ಮೆರವಣಿಗೆ ನಗರದ ಶ್ರೀ ಹರಿಹರೇಶ್ವರ ದೇವಸ್ಥಾನ ಮುಂಭಾಗದಿಂದ ಆರಂಭಗೊಂಡು ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಗಾಂಧಿ ವೃತ್ತ, ಮುಖ್ಯರಸ್ತೆ, ಶಿವಮೊಗ್ಗ ರಸ್ತೆಯ ಮೂಲಕ ಸಂಚರಿಸಿ ಸಿದ್ದೇಶ್ವರ್ ಪ್ಯಾಲೇಸ್ ಆವರಣಕ್ಕೆ ಅಂತ್ಯಗೊಂಡಿತು. 

ಮೆರವಣಿಗೆಯಲ್ಲಿ   ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ, ಗೌರವ ಕಾರ್ಯದರ್ಶಿಗಳಾದ ದಿಳ್ಳೆಪ್ಪ, ರೇವಣಸಿದ್ದಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಸಿ.ಜೆ. ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಸಹ ಕಾರ್ಯದರ್ಶಿ ವೀರೇಶ್ ಪ್ರಸಾದ್,  ತಾಲ್ಲೂಕು ಅಧ್ಯಕ್ಷರಾದ ಮಂಜುನಾಥಯ್ಯ,  ಸುಮತಿ ಜಯ್ಯಪ್ಪ ದಾವಣಗೆರೆ, ಚನ್ನಗಿರಿ ಮಧುಕುಮಾರ್, ಸದಸ್ಯೆ ರುದ್ರಾಕ್ಷಿ ಬಾಯಿ, ಎ ರಿಯಾಜ್ ಆಹ್ಮದ್, ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಎಂ.ಚಿದಾನಂದ ಕಂಚಿಕೇರಿ, ಬಿ.ಬಿ. ರೇವ ಣ್ಣನಾಯ್ಕ್ ಖಜಾಂಚಿ ವಿಜಯ ಮಹಾಂತೇಶ್, ಎಸ್.ಹೆಚ್. ಹೂಗಾರ್, ಗೀತಾ ಕೊಂಡಜ್ಜಿ, ವಿ‌.ಬಿ. ಕೊಟ್ರೇಶ್, ಈಶಪ್ಪ ಬೂದಿಹಾಳ, ಗಣಪತಿ ಮಾಳಂಜಿ, ಹೆಚ್.ಕೆ. ಕೊಟ್ರಪ್ಪ, ಹೆಚ್.ನಿಜಗುಣ, ಸುರೇಶ್ ಕುಣೆಬೆಳಕೆರೆ, ಶೇಖರಗೌಡ ಪಾಟೀಲ್, ಹೆಚ್.ಸಿ. ಕೀರ್ತಿ ಕುಮಾರ್,  ಜಿ ಮುಬಾರಕ್ ಅಲಿ, ಹೆಚ್. ಸುಧಾಕರ್, ಎಂ.ಉಮ್ಮಣ್ಣ, ಎ.ಕೆ. ಭೂಮೇಶ್,  ಶಶಿನಾಯ್ಕ್, ಪ್ರೀತಂ ಬಾಬು, ಇಲಿಯಾಸ್ ಆಹ್ಮದ್, ಭಾಗ್ಯದೇವಿ, ಸುಮಂಗಳ, ಸಿದ್ದಮ್ಮ, ಸುಜಾತ, ವಿಜಯಕುಮಾರಿ, ವೀರೇಶ್ ಅಜ್ಜಣ್ಣನವರ್, ಅಂಬುಜಾ ಪಿ. ರಾಜೊಳ್ಳಿ, ಕವಿತಾ ಪೇಟೆಮಠ್, ಕವಿತಾ, ಕರಿಬಸಪ್ಪ ಕಂಚಿಕೇರಿ, ರಮೇಶ್ ಮಾನೆ, ಸೀತಾ ನಾರಾಯಣ,  ಪರಮೇಶ್ವರಪ್ಪ ಕತ್ತಿಗೆ, ಜಿ.ಎಸ್. ನಾಗರಾಜ್, ಎನ್.ಇ. ಸುರೇಶ್, ಕೆ.ಬಿ. ರಾಜಶೇಖರ್, ಗುರುಬಸವರಾಜ್, ಅತೀಶ್,  ಜಿ.ಎಸ್. ಜಗದೀಶ್ ಬೆಳ್ಳೂಡಿ  ಇತರರು ಹಾಜರಿದ್ದರು.

error: Content is protected !!