ನೀಲಾನಹಳ್ಳಿಯಲ್ಲಿ ಇಂದು ತೇರು

ನೀಲಾನಹಳ್ಳಿಯಲ್ಲಿ ಇಂದು ತೇರು

ದಾವಣಗೆರೆ ತಾಲ್ಲೂಕಿನ ನೀಲಾನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ಕಾರಣಿಕವು ಇಂದು ನಡೆಯಲಿದೆ ಎಂದು ದೇವಸ್ಥಾನದ ಕನ್ವೀನರ್ ಎನ್.ಎಂ. ಆಂಜನೇಯ ಗುರೂಜಿ ತಿಳಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಇಂದು ಬೆಳಿಗ್ಗೆ 8.30ಕ್ಕೆ ರಥೋತ್ಸವ ನಡೆಯಲಿದೆ. ಬೆಳಿಗ್ಗೆ 9.30 ರಿಂದ 1.30ರವರೆಗೆ ಭಕ್ತಾದಿಗಳು ಹರಕೆ ತೀರಿಸುವ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30ಕ್ಕೆ ಬೇಟೆ ಆಡುವುದು, ನಂತರ 5.30ಕ್ಕೆ ಮುಳ್ಳುಗದ್ದುಗೆ ಏರುವುದು, 6.30ಕ್ಕೆ ಕಾರಣಿಕ ಮತ್ತು 7.30ಕ್ಕೆ ಭೂತ ಸೇವೆ, ನಂತರ 8.30ಕ್ಕೆ ಓಕಳಿ ಕಾರ್ಯ, 9.30ಕ್ಕೆ ಗಂಗಾ ಪೂಜೆಯೊಂದಿಗೆ ರಥೋತ್ಸವ ಪೂರ್ಣಗೊಳ್ಳಲಿದೆ.

error: Content is protected !!