ಚನ್ನಗಿರಿ ತಾಲ್ಲೂಕಿನ ಸುಪ್ರಸಿದ್ಧ ಸುಕ್ಷೇತ್ರ ಮಾವಿನ ಹೊಳೆ ಶ್ರೀ ಗುರುಮಹಾರುದ್ರ ಸ್ವಾಮಿ ಮಹಾಶಿವರಾತ್ರಿ ಕಾರ್ಯಕ್ರಮವು ಇಂದಿನಿಂದ ದಿನಾಂಕ 10ರ ಭಾನುವಾರದರೆಗೆ ನಡೆಯಲಿದೆ.
ಇಂದು ರಾತ್ರಿ ಶ್ರೀ ರೇಣುಕಾ ಶಿವಚಾರ್ಯ ಸ್ವಾಮೀಜಿ ತಾವರೆಕೆರೆ ಇವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಗುರು ಮಹಾರುದ್ರಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವವು ಬಾಣ ಬಿರುಸು, ಪುರಂತರ ಉರವಣೆ, ವೀರಗಾಸೆ, ನೃತ್ಯ, ಭಜನೆ, ಡೊಳ್ಳು ಕುಣಿತ, ಮಂಗಳವಾದ್ಯಗಳೊಂದಿಗೆ ಶ್ರೀಮಠಕ್ಕೆ ಆಗಮಿಸುವುದು. ನಂತರ ಬೆಳಗಿನ ಜಾವ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಮಹಾರುದ್ರಾಭಿಷೇಕ ಅಷ್ಟೋತ್ತರ, ಸಹಸ್ರ ಬಿಲ್ವಾರ್ಚನೆ ನಂತರ ಪ್ರಸಾದ ವಿನಿಯೋಗ ಕಾರ್ಯಕ್ರಮವು ಜರುಗುವುದು.
ನಾಳೆ ಶನಿವಾರ ಬೆಳಿಗ್ಗೆ ಶ್ರೀ ಗುರುಮಹಾರುದ್ರಾ ಸ್ವಾಮಿಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ಸೇವಾ ಕಾರ್ಯ ಜರುಗುವುದು. ದಿನಾಂಕ 10ರ ಭಾನುವಾರ ಬೆಳಿಗ್ಗೆ 11.30ಕ್ಕೆ ಶ್ರೀ ಭದ್ರಕಾಳಿ ಅಮ್ಮನವರ ಜಾತ್ರೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮವಿದೆ.