ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಕಡು ಬಡವರಿಗೆ ಸೈಕಲ್ ವಿತರಣೆ

ದಾವಣಗೆರೆ, ಫೆ. 26- ಸಾರ್ವಜನಿಕರ ಆರೋಗ್ಯ ದೃಷ್ಟಿ, ವಾಯು ಮಾಲಿನ್ಯ ನಿಯಂತ್ರಣ ಮತ್ತು ಬಡವರ ಸಣ್ಣ ಆರ್ಥಿಕತೆ ಉಳಿತಾಯಕ್ಕಾಗಿ ಕಡು ಬಡವರಿಗೆ ಸೈಕಲ್ ಸವಾರಿ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ. ಕೂಲಿ ಕಾರ್ಮಿಕರು, ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪತ್ರಿಕಾ ವಿತರಕರಿಗೆ ರೂ. 7000 ಬೆಲೆ ಬಾಳುವ ಹರ್‌ಕ್ಯುಲಸ್ ಸೈಕಲ್ ಅನ್ನು ಕೇವಲ ರೂ.4500 ಕ್ಕೆ ನೀಡಲಾಗುತ್ತಿದೆ ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್ ತಿಳಿಸಿದೆ. 

ಬಡವರು ಇದರ ಸದುಪಯೋಗ ಪಡೆದುಕೊಳ್ಳಬಹುದು. ವಿವರಕ್ಕೆ ಶ್ರೀಮತಿ ಮಂಜುಳಾ ಬಸವಲಿಂಗಪ್ಪ (7483 809312) ಅವರನ್ನು ಸಂಪರ್ಕಿಸಬಹುದಾಗಿದೆ.

error: Content is protected !!