ಶ್ರೀ ವೀರಾಂಜನೇಯ ಧ್ಯಾನ ಮಂದಿರದಲ್ಲಿ ವಿಶೇಷ ಪೂಜೆ

ಶ್ರೀ ವೀರಾಂಜನೇಯ ಧ್ಯಾನ ಮಂದಿರದಲ್ಲಿ ವಿಶೇಷ ಪೂಜೆ

ದಾವಣಗೆರೆ, ಫೆ.26- ನಗರದ ಶ್ರೀ ಶಿವಕುಮಾರಸ್ವಾಮಿ ಬಡಾವಣೆಯ ಶ್ರೀ ವೀರಾಂಜನೇಯ ಮಹಾಸ್ವಾಮಿಯ ಸಾರ್ವಜನಿಕ ಧ್ಯಾನ ಮಂದಿರದಲ್ಲಿ   ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಜಪ, ಭಜನೆ, ಸ್ಮರಣೆ ಮತ್ತು ಆರಾಧನೆ, ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ವೀರಾಂಜನೇಯ ಸ್ವಾಮಿಗೆ ನೈವೇದ್ಯ, ಗಂಗಾಜಲ ಅಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಪೂಜೆ ಮಹಾಮಂಗಳಾರತಿಯು ಶ್ರೀ ಬಸವರಾಜ ಗುರೂಜಿ ಯವರಿಂದ ನೆರವೇರಿತು.  

ಸಂಜೆ ಧ್ಯಾನ ಮಂದಿರದಲ್ಲಿ ಪೂಜ್ಯರ ಸಾನ್ನಿಧ್ಯದಲ್ಲಿ ಕಂಚಿಕೆರೆ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯವರು ಭಜನೆ, ಸಂಗೀತ ಗಾಯನ  ಕಾರ್ಯಕ್ರಮ ನಡೆಸಿಕೊಟ್ಟರು.   ಪ್ರಕಾಶ್ ಹೊಸಮನಿ ಶಾಮನೂರು ಇವರಿಂದ ಸರ್ವ ಭಕ್ತಾದಿಗಳಿಗೆ ದಾಸೋಹ ಸೇವೆ ನೆರವೇರಿತು.  

error: Content is protected !!