ದಾವಣಗೆರೆ, ಜ. 22 – ಶ್ರೀ ಶಂಕರ ಸೇವಾ ಸಂಘದ ವತಿಯಿಂದ ಶಾರದಾಂಬಾ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ರಾಮ ತಾರಕ ಹೋಮ ಹಮ್ಮಿಕೊಳ್ಳಲಾಗಿತ್ತು. ವೇದ ಬ್ರಹ್ಮ ಶ್ರೀ ಶಂಕರ ನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ಹೋಮ ನಡೆಸಲಾಯಿತು. ಶಂಕರ ಸೇವಾ ಸಂಘದ ಅಧ್ಯಕ್ಷರಾದ ಡಾ.ಬಿ.ಟಿ ಅಚ್ಚುತ್, ಶ್ರೀಮತಿ ನಳಿನಿ ಅವರು ಹೋಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಹಿಳೆಯರು ಶ್ರೀ ರಾಮನ ಸ್ತೋತ್ರ ಶ್ರೀ ರಾಮನ ಹಾಡುಗಳು ಹಾಗೂ ಭಜನೆ ಮಾಡಿದರು. ಹೋಮದಲ್ಲಿ ಉಪಾಧ್ಯಕ್ಷರಾದ ಮೋತಿ ಸುಬ್ರಮಣ್ಯ, ಬಾಲಕೃಷ್ಣ ವೈದ್ಯ, ಸುಬ್ರಮಣ್ಯ, ಅನಿಲ್ ಬಾರೇಂಗಳ್, ಡಾ. ಸುಬ್ಬುರಾವ್, ರಮೇಶ್ ಪಾಟೀಲ್, ದಿವಾಕರ್, ಮಹೇಶ್, ವಿಜೇಶ್, ಕಾರ್ತಿಕ್, ನಾರಾಯಣ್, ರಾಘವೇಂದ್ರ, ದೇವಸ್ಥಾನದ ಪುರೋಹಿತರಗಳಾದ ಗಣೇಶ್ ಭಟ್, ರಾಮಚಂದ್ರ ಭಟ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಪೂರ್ಣಾವಧಿ ಸಂದರ್ಭದಲ್ಲಿ ಮಧು ತಂಡದವರಿಂದ ಚಂಡೆ ಸೇವೆಯನ್ನು ಮಾಡಲಾಯಿತು.