ಭರಮಸಾಗರ, ಡಿ.28- ಇಲ್ಲಿನ ದೊಡ್ಡ ಕೆರೆಗೆ ಹರಿಸಲ್ಪಟ್ಟ ನೀರಿನ ಹಾಗೂ ಕೆರೆಯ ವೀಕ್ಷಣೆಗೆ ಆಗಮಿಸಿದ್ದ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರನ್ನು ಭಕ್ತಿ ಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಹೆಚ್.ಆಂಜನೇಯ, ಭರಮಸಾಗರದ ಶಾಸಕ ಚಂದ್ರಪ್ಪ, ಜಗಳೂರು ಶಾಸಕ ದೇವೇಂದ್ರಪ್ಪ, ಮಾಜಿ ಶಾಸಕರುಗಳಾದ ಹೆಚ್.ಪಿ. ರಾಜೇಶ್, ಎಸ್.ವಿ. ರಾಮಚಂದ್ರಪ್ಪ, ಮುಖಂಡರುಗಳಾದ ಡಿ.ವಿ. ಶರಣಪ್ಪ, ಜಿ.ಪಂ. ಮಾಜಿ ಸದಸ್ಯ ತಿಪ್ಪೇಸ್ವಾಮಿ ಸೇರಿದಂತೆ ಇತರರು ಈ ಸಂದರ್ಭದಲ್ಲಿದ್ದರು.
ಭರಮಸಾಗರದಲ್ಲಿ ತರಳಬಾಳು ಶ್ರೀಗಳಿಗೆ ಸನ್ಮಾನ
![24 bhmsg news 29.12.2023 ಭರಮಸಾಗರದಲ್ಲಿ ತರಳಬಾಳು ಶ್ರೀಗಳಿಗೆ ಸನ್ಮಾನ](https://janathavani.com/wp-content/uploads/2023/12/24-bhmsg-news-29.12.2023-860x638.jpg)