ದಾವಣಗೆರೆ, ಡಿ.24- ನಗರದ ರಂಗಭೂಮಿ ಹಿರಿಯ ಕಲಾವಿದ ಎಂ. ಮಲ್ಲೇಶ್ ಅವರ ನಿಧನಕ್ಕೆ ಹಿರಿಯ ರಂಗಭೂಮಿ ಕಲಾವಿದ ಚಿಂದೋಡಿ ಶಂಭುಲಿಂಗಪ್ಪ ಅವರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಬಲಾ, ಹಾರ್ಮೋನಿಯಂ, ಕೀಬೋರ್ಡ್, ಡ್ರಮ್ ಸೆಟ್ ಬಾರಿಸುವುದರಲ್ಲಿ ನಿಪುಣರಾಗಿದ್ದ ಮಲ್ಲೇಶ್ ಅವರು ತಮ್ಮ ಕಲೆಯಿಂದ ಶ್ರೀ ಗುರು ವಾದ್ಯವೃಂದಕ್ಕೆ ಕೀರ್ತಿ ತಂದಿದ್ದರು ಎಂದು ಶ್ರೀ ಗುರು ವಾದ್ಯವೃಂದದ ಅಧ್ಯಕ್ಷರೂ, ಕೆ.ಬಿ.ಆರ್ ಡ್ರಾಮಾ ಕಂಪನಿ ಮಾಲೀಕರೂ ಆಗಿರುವ ಚಿಂದೋಡಿ ಶಂಭುಲಿಂಗಪ್ಪ ಕಂಬನಿ ಮಿಡಿದಿದ್ದಾರೆ.