ನಗರದಲ್ಲಿ ಇಂದಿನಿಂದ ಪೊಲೀಸ್‌ ಕ್ರೀಡಾಕೂಟ

ಜಿಲ್ಲಾ ಪೊಲೀಸ್‌ ವತಿಯಿಂದ ವಾರ್ಷಿಕ ಕ್ರೀಡಾಕೂಟವು ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಇಂದಿನಿಂದ ಮೂರು ದಿನ ನಡೆಯಲಿದೆ.

ಇಂದು ಬೆಳಿಗ್ಗೆ 8 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆಯನ್ನು ರಾಯಚೂರು ತಾಲ್ಲೂಕು ಯರಮರಸ್‌ ಗ್ರಾಮದವರಾದ ಖೋ-ಖೋ ರಾಷ್ಟ್ರೀಯ ಕ್ರೀಡಾಕೂಟು ಅರ್ಜುನ್‌ ನೆರವೇರಿಸುವರು.

ನಾಡಿದ್ದು ದಿನಾಂಕ 22 ರ ಬುಧವಾರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾನ್ಯ ಪೊಲೀಸ್‌ ಉಪ ಮಹಾ ನಿರೀಕ್ಷಕರಾದ ಡಾ. ಕೆ. ತ್ಯಾಗರಾಜನ್‌ ಭಾಗವಹಿ ಸುವರು.  ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ವಿಜಯಕುಮಾರ್‌ ಎಂ. ಸಂತೋಷ ಮತ್ತು ಪೊಲೀಸ್‌ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್‌ ಉಪಸ್ಥಿತರಿರುವರು.

error: Content is protected !!