ನಾಳೆ ಲಿಂ.ಶಿವಾನಂದ ಮಹಾಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭ

ಶಿವಮೊಗ್ಗ, ನ.5- ಶಿಕಾರಿಪುರ ತಾಲ್ಲೂಕು ಶ್ರೀ ಶಿವನಪಾದ ಕ್ಷೇತ್ರದಲ್ಲಿ ನಾಡಿದ್ದು ದಿನಾಂಕ 7 ರ ಮಂಗಳವಾರ ಬೆಳಿಗ್ಗೆ 11.45 ಗಂಟೆಗೆ ಇಕ್ಕದ ಮಾರಯ್ಯನ ಮಹಾಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.  ನಾಳೆ ದಿನಾಂಕ 6 ರ ಸೋಮವಾರ ಸಂಜೆ 5 ಗಂಟೆಗೆ ಕರ್ತೃ ಗದ್ದುಗೆಯಲ್ಲಿ ರುದ್ರಾಭಿಷೇಕ, ಶಿವನಾಮಾವಳಿ, ಮಹಾಮಂಗಳಾರತಿ ನಡೆಯುವುದು. ದಿನಾಂಕ 7ರ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ. ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವವರು ದಿನಾಂಕ 6 ರ ಸೋಮವಾರ ಶ್ರೀ ಕ್ಷೇತ್ರದ ಕಾರ್ಯದರ್ಶಿಗಳಲ್ಲಿ ಹೆಸರನ್ನು ನೋಂದಾಯಿಸಲು ಕೋರಿದೆ.

error: Content is protected !!