ನಗರದಲ್ಲಿ ಇಂದು ಕನ್ನಡ ಗಾನ ವೈಭವ

ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಇಂದು ಸಂಜೆ 6.30ಕ್ಕೆ  ಹೈಸ್ಕೂಲ್ ಮೈದಾನದ ಹಿಂದೂ ಮಹಾಗಣಪತಿ ಮಹೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾಕುಂಚದ ಗಾಯನ ಕಲಾವಿದರಿಂದ `ಕನ್ನಡ ಗಾನ ವೈಭವ’ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಖ್ಯಾತ ಗಾಯಕ, ಗಾಯಕಿಯರಾದ ಎಂ.ಜಿ. ಜಗದೀಶ್, ಟಿ.ಆರ್. ಹೇಮಂತಕುಮಾರ್, ಪ.ವಿಶ್ವನಾಥ್, ಶ್ರೀಮತಿ ಅನಿತಾ ಕಲ್ಯಾಣ್‍ರಾವ್, ಶ್ರೀಮತಿ ನಿರ್ಮಲ ವಿಶ್ವನಾಥ್, ಶ್ರೀಮತಿ ಮಾನಸ, ಮಲ್ಲಾಪುರದ ಗ್ರಾಮೀಣ ಯುವ ಪ್ರತಿಭೆ ಕು. ಶೋಭಾ ಅವರುಗಳು ಕನ್ನಡ ಚಲನಚಿತ್ರ ಗೀತೆಯೊಂದಿಗೆ, ಭಾವಗೀತೆ, ಭಕ್ತಿಗೀತೆ, ಜನಪದ ಗೀತೆಗಳನ್ನು ಹಾಡಲಿದ್ದಾರೆ.

error: Content is protected !!