ಪಿಂಚಣಿಗಾಗಿ ಅನುದಾನಿತ ಶಾಲಾ-ಕಾಲೇಜುಗಳ ನಿವೃತ್ತ ನೌಕರರ ಮನವಿ

ದಾವಣಗೆರೆ, ಅ. 5- 2006 ರ ಪೂರ್ವದಲ್ಲಿ ನೇಮಕವಾಗಿ 2006 ರ ನಂತರ ಅನುದಾನಕ್ಕೊಳ ಪಟ್ಟ ಅನುದಾನಿತ ಶಾಲಾ-ಕಾಲೇಜು ನೌಕರರ ದಾವಣಗೆರೆ ಜಿಲ್ಲಾ ಮಟ್ಟದ ಸಭೆಯನ್ನು ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿತ್ತು.

ಇದೇ ವೇಳೆ ಜಿಲ್ಲಾಮಟ್ಟದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಬಿ.ಎಂ. ಶಿವಪ್ಪ, ಅಧ್ಯಕ್ಷರಾಗಿ ಜಿ.ಬಿ.ಹಾವೇರಿ, ಕಾರ್ಯದರ್ಶಿಯಾಗಿ ಎಂ. ಬಸವರಾಜ್, ಉಪಾಧ್ಯಕ್ಷರಾಗಿ ಎಸ್. ಜಗನ್ನಾಥ್, ಚನ್ನಬಸಪ್ಪ, ಚನ್ನಪ್ಪ ಪ್ಯಾಟಿ, ಸಂಘಟನಾ ಕಾರ್ಯದರ್ಶಿಯಾಗಿ ರವಿಕುಮಾರ ಗೆಜ್ಜೆ, ಖಜಾಂಚಿಯಾಗಿ ಬಿ.ವಿ. ಶ್ರೀನಿವಾಸ್, ಸಹ ಕಾರ್ಯದರ್ಶಿಯಾಗಿ ಸುಮಿತ್ರಾ  ಮುಂತಾದವರನ್ನು ಆಯ್ಕೆ ಮಾಡಲಾಯಿತು. ಇದೇ ಸಮಯದಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವ ರನ್ನು ಭೇಟಿ ಮಾಡಿ ಪಿಂಚಣಿಗಾಗಿ ಮುಖ್ಯಮಂತ್ರಿ ಯವರಿಗೆ ಶಿಫಾರಸ್ಸು ಪತ್ರವನ್ನು ಪಡೆಯಲಾಯಿತು.

error: Content is protected !!