ಹರಿಹರ : ನಗರಸಭೆ ಕಾಮಗಾರಿಗೆ ತಡೆ ಗ್ರಾವೆಲ್ ಹಾಕದೇ ಇರುವುದಕ್ಕೆ ಆಕ್ಷೇಪ

ಹರಿಹರ : ನಗರಸಭೆ ಕಾಮಗಾರಿಗೆ ತಡೆ ಗ್ರಾವೆಲ್ ಹಾಕದೇ ಇರುವುದಕ್ಕೆ ಆಕ್ಷೇಪ

ಹರಿಹರ, ಸೆ. 21 – ನಗರದ ನಗರಸಭೆಯ ನೂತನ ಕಟ್ಟಡದ ಕಾಮಗಾರಿ ಕಳಪೆಯಾಗಿದೆ. ಗ್ರಾವೆಲ್ ಹಾಕದೆ ಮಣ್ಣು ಮಿಶ್ರಿತ ಕಟುಗನ್ನು ಹಾಕಿ ಗುಂಡಿ ಮುಚ್ಚಲಾಗಿದೆ ಎಂದು ಆರೋಪಿಸಿ, ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಪೂರ್ ಗುತ್ತಿಗೆದಾರ ಮುಖ್ಯಸ್ಥರನ್ನು  ತರಾಟೆಗೆ ತೆಗೆದುಕೊಂಡು ಕಾಮಗಾರಿ ಸ್ಥಗಿತಗೊಳಿಸಿದರು.

ಈ ವೇಳೆ ಮಾತನಾಡಿದ ಪೌರಾಯುಕ್ತ ಐಗೂರು ಬಸವರಾಜ್, ಗ್ರಾವೆಲ್ ಹಾಕಿ ಗುಂಡಿಗಳನ್ನು ಮುಚ್ಚಿದರೆ ಕಟ್ಟಡವು ಗುಣಮಟ್ಟದಿಂದ ಕೂಡಿರುತ್ತದೆಯೇ. ಈ ಕಾಮಗಾರಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಲ್ಯಾಬ್ ಪರೀಕ್ಷೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮುಜಾಮಿಲ್‌ ಬಿಲ್ಲು, ನಗರಸಭೆ ಎಇಇ ತಿಪ್ಪೇಸ್ವಾಮಿ, ಜೆಡಿಎಸ್ ಮುಖಂಡ ಸುರೇಶ್ ಚಂದಪೂರ್,  ಇಂಜಿನಿಯರ್ ಮಹಾಂತೇಶ್, ಗುತ್ತಿಗೆದಾರ ಮುಖ್ಯಸ್ಥ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!