ದಾವಣಗೆರೆ, ಜೂ.3- ಮನೆ ಮುಂಭಾಗದಲ್ಲಿ ಕಾಂಪೌಂಡ್ಗೆ ನಿರ್ಮಿಸಲಾಗಿದ್ದ ಕಬ್ಬಿಣದ ಗೇಟ್ ಬಿದ್ದ ಪರಿಣಾಮ ನಾಗಾರ್ಜುನ ಎಂಬ 11 ವರ್ಷದ ಬಾಲಕ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಬಸಾಪುರ ಗ್ರಾಮದಲ್ಲಿ ನಡೆದಿದೆ. ಬಸಾಪುರ ಗ್ರಾಮದ ಪುರೋಹಿತರ ಕೆಲಸ ಮಾಡುವ ಗುರುಶಾಂತಯ್ಯ ಎಂಬುವರ ಮಗ ನಾಗಾರ್ಜುನ್ ಮೃತ ಬಾಲಕ. 6ನೇ ತರಗತಿ ಓದುತ್ತಿದ್ದ ಈತ ಜೂ.2ರ ಶುಕ್ರವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಗೆಳೆಯರೊಂದಿಗೆ ಆಟವಾಡಲು ಹೊರ ಹೋಗಿದ್ದಾನೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರುವ ಇರುವ ಸಿದ್ದಪ್ಪ ಅವರ ಮನೆಯ ಕಾಂಪೌಂಡ್ ಗೇಟ್ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದು, ಅಲ್ಲಿ ಆಟವಾಡಲು ಹೋಗಿದ್ದಾಗ ಗೇಟ್ ಬಿದ್ದು ಮುಖಕ್ಕೆ ಹಾಗೂ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಗುರುಶಾಂತಯ್ಯ ಅವರು ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
May 19, 2024