ಟ್ರಾಫಿಕ್‌ ಪೊಲೀಸ್‌ ನಿಯೋಜಿಸಿ..!

ಮಾನ್ಯರೇ, 

ನಗರದ ಹದಡಿ ರಸ್ತೆಯಲ್ಲಿರುವ ಸರ್‌.ಎಂ.ವಿ ಪಿಯು ಕಾಲೇಜಿನ ಆರಂಭ ಮತ್ತು ಮುಕ್ತಾಯದ ಸಮಯದಲ್ಲಿ ಹೆಚ್ಚು ವಾಹನ ದಟ್ಟನೆ ಆಗುತ್ತಿದ್ದು, ಈ ಸಮಯದಲ್ಲೇ ಅಲ್ಲಿ ವಾಹನ ಅಪಘಾತಗಳು ಹೆಚ್ಚು ಕಂಡು ಬರುತ್ತಿವೆ.

ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಹಾಗೂ ಅಪಘಾತದ ಪ್ರಮಾಣ ತಗ್ಗಿಸಲು, ಪೊಲೀಸ್‌ ಇಲಾಖೆಯು ಕಾಲೇಜು ಬಿಡುವ ಸಮಯದಲ್ಲಿ ಟ್ರಾಫಿಕ್‌ ಪೊಲೀಸ್‌ ನಿಯೋಜಿಸಿದರೆ ಸಾರ್ವಜನಿಕರ ಹಿತ ಕಾಪಾಡಿದಂತಾಗುತ್ತದೆ.

– ಡಾ. ಜಿ. ನಾಗರಾಜ್‌, ಎಂ.ಸಿ.ಸಿ. `ಬಿ’ ಬ್ಲಾಕ್‌, ದಾವಣಗೆರೆ.

error: Content is protected !!