ಮಳೆ ಕೊರತೆ ಮಾಹಿತಿ ಸಲ್ಲಿಸಲು ಶಾಸಕ ಪ್ರಕಾಶ ಕೋಳಿವಾಡ ಸೂಚನೆ

ಮಳೆ ಕೊರತೆ ಮಾಹಿತಿ ಸಲ್ಲಿಸಲು  ಶಾಸಕ ಪ್ರಕಾಶ ಕೋಳಿವಾಡ ಸೂಚನೆ

ರಾಣೇಬೆನ್ನೂರು, ಆ.25- ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರಿಗೆ, ಸಾರ್ವಜನಿಕರಿಗೆ ಆಗಿರುವ ತೊಂದರೆ ಬಗ್ಗೆ ತೀವ್ರ ಗಮನ ಹರಿಸಿ ಕಾರ್ಯ ನಿರ್ವಹಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಪ್ರಕಾಶ ಕೋಳಿವಾಡ ಸೂಚನೆ ನೀಡಿದರು.

ಅವರು ಬೆಳಿಗ್ಗೆ ತಾಲ್ಲೂಕು ಆಡಳಿತದ ಸಭಾಭವನದಲ್ಲಿ ಹೋಬಳಿ ಮತ್ತು ಎಲ್ಲ ಹಂತಗಳ ಅಧಿಕಾರಿ ಹಾಗೂ ಸಿಬ್ಬಂದಿ ಸಭೆ ನಡೆಸಿದರು. ಬೆಳೆ ಪ್ರಮಾಣ ಮತ್ತು ಆಗಿರಬಹುದಾದ ನಷ್ಟದ ಬಗ್ಗೆ ಸರ್ಕಾರಕ್ಕೆ ಸರಿಯಾದ ಮಾಹಿತಿ ಕಳಿಸಲು ಹೇಳಿ, ತಮ್ಮ ಅಧಿಕಾರ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ತಮ್ಮ ಸಿಬ್ಬಂದಿ ಜೊತೆಗಿದ್ದು ಕಾರ್ಯ ನಿರ್ವಹಿಸುವಂತೆ ಶಾಸಕರು ತಿಳಿಸಿದರು.

error: Content is protected !!