ಸಚಿವ ಅಶ್ವತ್ಥ ನಾರಾಯಣರ ವಜಾಕ್ಕೆ ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಒತ್ತಾಯ

ಸಚಿವ ಅಶ್ವತ್ಥ ನಾರಾಯಣರ ವಜಾಕ್ಕೆ  ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಒತ್ತಾಯ

ಕೊಟ್ಟೂರು, ಫೆ.21- ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ದ ಅವಹೇಳನಕಾರಿ ಮಾತನಾಡಿರುವ ಸಚಿವ ಡಾ.ಸಿ.ಎನ್.ಅಶ್ವತ್ಥ್‌ ನಾರಾಯಣ   ಅವರನ್ನು ಸಚಿವ ಸಂಪುಟದಿಂದ  ವಜಾಗೊಳಿಸುವಂತೆ ಇಲ್ಲಿನ  ಬ್ಲಾಕ್ ಕಾಂಗ್ರೆಸ್  ಒತ್ತಾಯಿಸಿದೆ.

ಒಬ್ಬ ಅಪ್ರತಿಮ ಹೋರಾಟಗಾರ, ಅತ್ಯಂತ ಹಿರಿಯ ಆಡಳಿತಗಾರರ ಜನಪ್ರಿಯತೆ  ಕಂಡು, ಬರುವಂತಹ ಚುನಾವಣೆಯಲ್ಲಿ  ತಮ್ಮ ಬಿಜೆಪಿ ಪಕ್ಷಕ್ಕೆ ಸೋಲು ಉಂಟಾ ಗುವ ಭೀತಿಯಲ್ಲಿ ಇರುವ ಬಿಜೆಪಿ ನಾಯಕರುಗಳು  ಪ್ರತಿ ದಿನ ಒಂದಲ್ಲಾ ಒಂದು ವೇದಿಕೆಯಲ್ಲಿ ಸಿದ್ದರಾಮಯ್ಯ ನವ ರನ್ನು ಕಟು ಶಬ್ಧಗಳಲ್ಲಿ ಟೀಕಿಸುತ್ತಿದ್ದು, ಇದರ ಮುಂದುವ ರೆದ ಭಾಗವಾಗಿ ಸಚಿವ ಡಾ.ಸಿ.ಎನ್. ಅಶ್ವತ್‌ನಾರಾಯಣ ಅತ್ಯಂತ ಕೀಳು ಮನಸ್ಥಿತಿಯನ್ನು ಪ್ರದರ್ಶಿಸುತ್ತಾ ಸಿದ್ದರಾ ಮಯ್ಯ ನವರನ್ನು ಹೊಡೆದು ಹಾಕಿ ಎನ್ನುವ ಪದಬಳಕೆ ಮಾಡಿ ರಾಜ್ಯದಲ್ಲಿನ ಕೋಟ್ಯಾಂತರ ಅಭಿಮಾನಿಗಳಿಗೆ ನೋವು ಉಂಟು ಮಾಡಿದ್ದಾರೆ. ನಾಡಿನ ಒಬ್ಬ ಹಿರಿಯ ಮುತ್ಸದ್ದಿಯನ್ನು ಟೀಕಿಸುವ ಭರದಲ್ಲಿ ತಮ್ಮ ವಿವೇಚನೆ ಯನ್ನು ಮರೆತು ಅನಾಗರಿಕರಂತೆ ವರ್ತಿಸಿರುವ ಸಚಿವರ ನಡೆಯಿಂದ ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿರುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ  ಸಚಿವ ಡಾ.ಸಿ.ಎನ್. ಅಶ್ವತ್ಥ್‌ ನಾರಾಯಣ  ಅವರನ್ನು  ಸಚಿವ ಸಂಪು ಟದಿಂದ ವಜಾಗೊಳಿಸಿ ಸಿದ್ದರಾಮಯ್ಯನವರ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಐ. ಎಂ. ದಾರುಕೇಶ್.  ಹರಾಳು ನಂಜಪ್ಪ, ಅಡಕಿ ಮಂಜುನಾಥ್, ಗೂಳಿ ಮಲ್ಲಿಕಾರ್ಜುನ್, ಚಿನ್ನನಹಳ್ಳಿ ಮುಗಪ್ಪ, ಕನ್ನಹಳ್ಳಿ ರಾಜಣ್ಣ, ಅಚಮನಿ ಮಲ್ಲಿಕಾರ್ಜುನ್, ಪೂಜಾರ್ ನಾಗಪ್ಪ, ಅಶೋಕ್ ಇಂಜಿನಿಯರ್, ಶಿವಕುಮಾರ್ ಗೌಡ,  ಮೊರೂರು ಕೊಟ್ರೇಶ್, ಉಮಾಪತಿ, ಎಲ್ಐಸಿ ಮೂಗಣ್ಣ, ಮಾನಸ ರಾಜಣ್ಣ  ಇನ್ನೂ ಪ್ರಮುಖ ಮುಖಂಡರು ಇದ್ದರು.

error: Content is protected !!