ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ 39 ಲಕ್ಷ ರೂ. ಸಂಗ್ರಹ

ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ  39 ಲಕ್ಷ  ರೂ. ಸಂಗ್ರಹ

ಕೊಟ್ಟೂರು, ಫೆ. 10 – ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ 39,46,080 /- ರೂ. ಸಂಗ್ರಹವಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಯು.ಎಂ.ಪ್ರಕಾಶರಾವ್ ತಿಳಿಸಿದರು. ದೇವಸ್ಥಾನದ ಕಾರ್ಯಾಲಯದಲ್ಲಿ ಹುಂಡಿ ಏಣಿಕೆ ಕಾರ್ಯ ನಡೆಯಿತು. ಒಟ್ಟು  ಹುಂಡಿಗಳಲ್ಲಿ ಎರಡು ತಿಂಗಳುಗಳ ಹಣ ಸಂಗ್ರಹವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆ ಇಓ ಬಿ.ಎಂ. ಕೃಷ್ಣಪ್ಪ, ಪೊಲೀಸ್ ಇಲಾಖೆಯವರು, ತಾಲ್ಲೂಕು ಆಡಳಿತ ಕಚೇರಿ ಅಧಿಕಾರಿಗಳು, ಧರ್ಮಕರ್ತರು, ಸಿ.ಎಚ್.ಎಂ ಗಂಗಾಧರಯ್ಯ, ಸೋಮಶೇಖರ್ ಗೌಡ, ಸೋಮನಾಥ್ ಪಟೇಲ್,  ಶಿವಕುಮಾರ್ ಗೌಡ, ಪ್ರದೀಪ್, ಕಾರ್ತಿಕ್, ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ಅಧಿಕಾರಿ ಶಿವರಾಜ್ ಕುಮಾರ್, ದ್ರಾಕ್ಷಾಯಿಣಿ ಹಾಗೂ ಸಿಬ್ಬಂದಿ, ಕಾಲೇಜ್ ವಿದ್ಯಾರ್ಥಿಗಳು, ಆಯಗಾರ ಬಳಗದ ಕೆಂಪಳ್ಳಿ ಗುರುಸಿದ್ಧನಗೌಡ, ಕೆ.ಎಸ್.ನಾಗರಾಜ್ ಗೌಡ,  ಕಟ್ಟಿಮನಿ ದೈವಸ್ಥರು ಮುಂತಾದವರು ಪಾಲ್ಗೊಂಡಿದ್ದರು.

error: Content is protected !!