ಕೆರೆ ತುಂಬಿಸುವ ಯೋಜನೆಗೆ 519 ಕೋಟಿ ಅನುದಾನ ಬಿಡುಗಡೆ

ಕೆರೆ ತುಂಬಿಸುವ ಯೋಜನೆಗೆ 519 ಕೋಟಿ  ಅನುದಾನ ಬಿಡುಗಡೆ

ನ್ಯಾಮತಿ ತಾಲ್ಲೂಕು ಗ್ರಾಮ ವಾಸ್ತವ್ಯದ ಸಮಾರೋಪ ಸಮಾರಂಭದಲ್ಲಿ  ಎಂ.ಪಿ.ರೇಣುಕಾಚಾರ್ಯ 

ನ್ಯಾಮತಿ, ಮಾ.2- ನ್ಯಾಮತಿ ತಾಲ್ಲೂ ಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ 519 ಕೋಟಿ ಅನುದಾನ ಬಿಡುಗಡೆಯಾ ಗಿದ್ದು, ಇನ್ನೆರಡು ತಿಂಗಳಲ್ಲಿ ತಾಲ್ಲೂಕಿನ  ಎಲ್ಲಾ ಕೆರೆಗಳಿಗೆ ನೀರು ಹರಿಯುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು. 

ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

17 ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳು ನಡೆದಿದ್ದು, ಅವುಗಳಲ್ಲಿ ಸವಳಂಗ ಗ್ರಾಮ ದಲ್ಲಿ ಸಮಾರೋಪ ಕಾರ್ಯಕ್ರಮ ಇದಾ ಗಿದೆ. ಸರ್ಕಾರದ ಸೌಲಭ್ಯ ಪಡೆಯಲು ಕಚೇರಿಗಳಿಗೆ ಅಲೆದಾಡುವುದು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಸ್ಥಳದ ಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಒದಗಿಸು ವುದು ಗ್ರಾಮ ವಾಸ್ತವ್ಯ ಕಾರ್ಯಕ್ರಮ ವಾಗಿದ್ದು, ಜನತೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ಅವಳಿ ತಾಲ್ಲೂಕಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದವರು 10 ಕೆಜಿ ಅಕ್ಕಿ, ಮಹಿಳೆಯರಿಗೆ ರೂ 2 ಸಾವಿರ ವೇತನ ನೀಡುತ್ತೇವೆ ಎಂದು ಹೇಳುತ್ತಿರುವುದು  ಚುನಾವಣಾ ಗಿಮಿಕ್, ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಿದ್ದು, ಉಚಿತವಾಗಿ ಕೋವಿಡ್ ಲಸಿಕೆ ವಿತರಣೆ, ಮೇಕ್‍ಇನ್ ಇಂಡಿಯಾ ಮೂಲಕ ಭಾರತವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡಿದ್ದಾರೆ ಎಂದರು. 

ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ಗಿರೀಶ್ ಪಟೇಲ್, ಸದಸ್ಯರಾದ ಲಲಿತಮ್ಮ, ಬಸವರಾಜಪ್ಪ, ರತ್ನಮ್ಮ, ನಿಂಗಮ್ಮ, ನಾಗರಾಜನಾಯ್ಕ, ನೀಲಾಬಾಯಿ, ಗಾಯಿತ್ರಿ, ರಾಜಪ್ಪ, ರುಕ್ಮಿಣಿಬಾಯಿ, ಬಗರ್‍ಹುಕ್ಕುಂ ಸಮಿತಿ ಅಧ್ಯಕ್ಷ ವೀರಣ್ಣಗೌಡ, ಸದಸ್ಯರಾದ ಮಲ್ಲೇಶಣ್ಣ, ಶಿಕ್ಷಣ ಇಲಾಖೆಯ ಮುದ್ದನಗೌಡರು, ಸಂಜೀವಿನಿ ಒಕ್ಕೂಟದ ಭಾಗ್ಯಮ್ಮ, ಭಾರತಿ ಉಪಸ್ಥಿತರಿದ್ದರು. 

ತಾ.ಪಂ.ಇಒ ರಾಮಭೋವಿ ಸ್ವಾಗತಿ ಸಿದರು. ತಹಶೀಲ್ದಾರ್ ಬಿ.ವಿ.ಗಿರೀಶ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಒ ಟಿ. ಸುರೇಶ ನಿರೂಪಿಸಿದರು.

error: Content is protected !!