ರಾಣೇಬೆನ್ನೂರಿಗೆ ಇಂದು ಸಚಿವ ಜಾರಕಿಹೊಳಿ

ರಾಣೇಬೆನ್ನೂರಿಗೆ ಇಂದು ಸಚಿವ ಜಾರಕಿಹೊಳಿ - Janathavaniಆರ್‌ಟಿಎಸ್ ಮಹಾವಿದ್ಯಾಲಯದಲ್ಲಿ ಇಂದು ನಡೆಯುವ ರಾಷ್ಟ್ರೀಯ ಬಹುಶಿಸ್ತೀಯ ಸಮ್ಮೇಳನದ ಮುಖ್ಯ ಅತಿಥಿಯಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಪ್ರಕಾಶ ಕೋಳಿವಾಡ, ಕರ್ನಾಟಕ ವಿಶ್ವವಿದ್ಯಾಲಯದ ಸುಭಾಸಚಂದ್ರ ನಾಟಿಕಾರ, ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ತಲ್ಲೂರ ಅವರುಗಳು ಭಾಗವಹಿಸುವರು.  ಐದು ವಿದೇಶಿಯರ ಹಾಗೂ ವಿವಿಧ ರಾಜ್ಯದ ಕಾಲೇಜುಗಳ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 2 ನೂರಕ್ಕೂ ಹೆಚ್ಚು  ಪ್ರಬಂಧಗಳನ್ನು ಕಳಿಸಿದ್ದಾರೆ ಎಂದು ಪ್ರಾಚಾರ್ಯ ಸಿ.ಎ. ಹರಿಹರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜೊತೆಯಲ್ಲಿ ಡಾ. ಮಧುಕುಮಾರ, ಡಾ.ಆನಂದ ಕಾನಪೇಟೆ, ಎನ್.ಎ. ಪ್ರವೀಣ ಇದ್ದರು.

error: Content is protected !!