ತಹಶೀಲ್ದಾರ್ ಸಹಿ ನಕಲು : ಆರೋಪ

ದಾವಣಗೆರೆ, ಫೆ.4-  ಚನ್ನಗಿರಿ ತಹಶೀಲ್ದಾರ್ ಅವರ ಸೀಲು ಹಾಗೂ ಸಹಿಗಳನ್ನು ಕೆಲ ಮಧ್ಯವರ್ತಿಗಳು ನಕಲು ಮಾಡಿದ್ದು, ಕ್ರಮ ಕೈಗೊಳ್ಳು ವಂತೆ ಕಬ್ಬಳ ಗ್ರಾಮದ ಪವನ್ ರಾಜ್ ಪವಾರ್ ಪೊಲೀಸರನ್ನು ಆಗ್ರಹಿಸಿದ್ದಾರೆ.

ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಗಿರಿ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಎನ್.ಗಾಣದಗಟ್ಟೆ ಬಳಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಪಡೆಯಲು 242ಕ್ಕೂ ಹೆಚ್ಚು ಜನರು ತಹಶೀಲ್ದಾರ್ ಅವರ ಸಹಿ, ಹಾಗು ಸೀಲನ್ನು ನಕಲು ಮಾಡುವ ಮೂಲಕ ಹುನ್ನಾರ ನಡೆಸಿದ್ದಾರೆ.  ಪತ್ರಿಕಾಗೋಷ್ಠಿ ಯಲ್ಲಿ ಹರೀಶ್ ಹಳ್ಳಿ, ವೀರಾಚಾರ್, ಬಸವರಾಜ್ ಗುಡಿಹಳ್ಳಿ ಉಪಸ್ಥಿತರಿದ್ದರು.

error: Content is protected !!