ದಾವಣಗೆರೆ, ಮಾ.21- ನಗರದ ವಿಲಾಸ್ ಕಪೂರ್ ಅವರು ಬೆಂಗಳೂರಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈಚೆಗೆ ಪ್ರಸಾದ ಹಾಳಾಗುವುದನ್ನು ತಡೆಗಟ್ಟಲು ಮಾಡಿದಂತಹ ಕಾರ್ಯದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಯುಪಿಎಸ್ಸಿ ಓದುತ್ತಿರುವ ಇವರು, `ಅನ್ನ ಪ್ರಸಾದ ಬೆಂಗಳೂರು’ ಎಂಬ ಗ್ರೂಪ್ ಮಾಡಿದ್ದು, ಈ ಗ್ರೂಪಿನಲ್ಲಿ ಸಾವಿರಾರು ವಿದ್ಯಾರ್ಥಿ ಗಳು ಇದ್ದು, ಇದರ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾನ ಮಾಡುತ್ತಿದ್ದಾರೆ.