ಇಂದು ಶರಣ ಚಿಂತನ ಆನ್‌ಲೈನ್‌ ಗೋಷ್ಠಿ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಆನ್‌ಲೈನ್‌ನಲ್ಲಿ ಶರಣ ಚಿಂತನ ಗೋಷ್ಠಿ ಇಂದು ಸಂಜೆ 7 ರಿಂದ ಸಂಜೆ 9ರವರೆಗೆ ನಡೆಯಲಿದೆ. 

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಡಾ. ಹೆಳವರಹುಂಡಿ ಸಿದ್ದಪ್ಪ ವಹಿಸಲಿದ್ದು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ    ಪ್ರಾಸ್ತಾವಿಕ ನುಡಿಗಳಾನ್ನಾಡುವರು. 

ಡಾ. ಕೆ. ರವೀಂದ್ರನಾಥ ಅವರು `ವಚನಕಾರರ ವಚನೇತರ ಸಾಹಿತ್ಯ’ ವಿಷಯದ ಬಗ್ಗೆ ಮಾತನಾಡುವರು.  

ಜಿ.ಎಂ. ಕುಮಾರಪ್ಪ, ಭರಮಪ್ಪ ಮೈಸೂರು ನಿರೂಪಣೆ ಮತ್ತು ಕಾರ್ಯ ನಿರ್ವಹಿಸುವರು.

error: Content is protected !!