ನಗರದಲ್ಲಿ ಇಂದು ಜ್ಞಾನ ಕಾಶಿ ಪದವಿ ಕಾಲೇಜು ಪ್ರಾರಂಭೋತ್ಸವ

ಶ್ರೀ ಸಿದ್ದಿವಿನಾಯಕ ಟ್ರಸ್ಟ್‌, ಜ್ಞಾನಕಾಶಿ ಪದವಿ ಕಾಲೇಜಿನ ಪದವಿ ತರಗತಿಗಳ ಪ್ರಾರಂಭೋತ್ಸವವು ಇಂದು ಬೆಳಿಗ್ಗೆ 11 ಕ್ಕೆ ಜ್ಞಾನಕಾಶಿ ಪದವಿ ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಮಲ್ಲಿಕಾರ್ಜುನ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಂಶುಪಾಲ ಡಾ. ಕೆ.ಬಿ. ರಂಗಪ್ಪ, ಪ್ರೊ. ಭೀಮಣ್ಣ ಸುಣಗಾರ,  ಶ್ರೀ ಸಿದ್ದಿವಿನಾಯಕ ಎಜುಕೇಶನ್‌ ಟ್ರಸ್ಟ್‌ ಉಪಾಧ್ಯಕ್ಷರಾದ ಶ್ರೀಮತಿ ರಶ್ಮಿ  ಉದ್ಘಾಟಸಲಿದ್ದು, ಕನ್ನಡ ಉಪನ್ಯಾಸಕ ಮಲ್ಲಿಕಾರ್ಜುನ್‌ ಪ್ರಾಸ್ತಾವಿಕವಾಗಿ ನುಡಿಗಳನ್ನಾಡುವರು.

error: Content is protected !!