ವರದಕ್ಷಿಣೆ ಸಾವು: ಆರೋಪಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಚನ್ನಗಿರಿ, ಅ.17- ವರದಕ್ಷಿಣಿ ಕಿರುಕುಳ ನೀಡಿ ಮಹಿಳೆಯ ಸಾವಿಗೆ ಕಾರಣನಾದ ಆರೋಪಿಗೆ ಇಲ್ಲಿನ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 40 ಸಾವಿರ ದಂಡ ವಿಧಿಸಿದೆ. 

ದಂಡದ ಮೊತ್ತದ ಹಣದಲ್ಲಿ 35 ಸಾವಿರ ರೂ. ಸಂತ್ರಸ್ಥೆ ಕುಟುಂಬಕ್ಕೂ, ಉಳಿದ 5 ಸಾವಿರವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಮಯ್ಯನವರ್ ಆದೇಶಿಸಿದ್ದಾರೆ.

ಚನ್ನಗಿರಿ ತಾಲ್ಲೂಕು ಮೇದುಗೊಂಡನಹಳ್ಳಿಯ ಮಂಜುನಾಥ ಶಿಕ್ಷಕ ಗುರಿಯಾದ ಆರೋಪಿಯಾಗಿದ್ದು, ತನ್ನ ಮಗಳು ಶೋಭಾರಾಣಿಗೆ ಮಂಜುನಾಥ ಹಾಗೂ ಅವರ ಮನೆಯವರು ವರದಕ್ಷಿಣೆ ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಿದ್ದರು ಎಂದು ತಾಯಿ ನಿಂಗಪ್ಪ ದೂರು ದಾಖಲಿಸಿದ್ದರು. 

ಚನ್ನಗಿರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಮನ್ನೋಳ್ಳಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲರಾದ ಕೆ.ಎಸ್ ಸತೀಶ್ ನ್ಯಾಯ ಮಂಡನೆ ಮಾಡಿದ್ದರು.

error: Content is protected !!