ಹರಿಹರ, ಅ.15- ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವ ಪ್ರಯುಕ್ತ ತುಂಗಭದ್ರಾ ನದಿಗೆ ಮಣ್ಣು ಮಿಶ್ರಿತ ಕೆಸರು ನೀರು ಹರಿದು ಬರುತ್ತದೆ. ನದಿಯಿಂದ ಹರಿಹರ ನಗರಕ್ಕೆ ನೀರು ಪೂರೈಸುತ್ತಿರುವ ಕಾರಣ ಸಾರ್ವಜನಿಕರು ನೀರನ್ನು ನೇರವಾಗಿ ಕುಡಿಯದೇ, ಕುದಿಸಿ ಆರಿಸಿದ ನೀರನ್ನು ಕುಡಿಯಬೇಕೆಂದು ನಗರಸಭೆ ಪೌರಯುಕ್ತರು ತಿಳಿಸಿದ್ದಾರೆ.
October 17, 2024