ನಗರದಲ್ಲಿ ಕಲ್ಲು ತೂರಾಟ ಪ್ರಕರಣ : ಬಂಧಿತರ ಬಿಡುಗಡೆ

ದಾವಣಗೆರೆ, ಅ.15-  ನಗರದ ಬೇತೂರು ರಸ್ತೆಯಲ್ಲಿರುವ ಅರಳಿಮರ ವೃತ್ತ ಮತ್ತು ವೆಂಕಟೇಶ್ವರ ವೃತ್ತದ ಬಳಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದವರ ಪೈಕಿ 31 ಜನರನ್ನು ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 

ಸತೀಶ್ ಪೂಜಾರಿ ಹಾಗೂ ನೂರ್ ಅಹ್ಮದ್ ಸೇರಿದಂತೆ ಮಂಗಳವಾರ ಬಿಡುಗಡೆಯಾದವರ ಪೈಕಿ 14 ಯುವಕರು ಹಿಂದೂಗಳಾದರೆ, 17 ಜನರು ಮುಸ್ಲಿಂ ಸಮುದಾಯದವರಾಗಿದ್ದಾರೆ. 

ಉಳಿದ 8 ಜನರು ಬುಧವಾರ ಬಿಡುಗಡೆ ಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದಕ್ಕೂ ಮುನ್ನ ನಾಲ್ಕು ಜನರಿಗೆ ಜಾಮೀನು ದೊರೆತಿತ್ತು.  ಕಳೆದ ಸೆಪ್ಟೆಂಬರ್ 19ರ ಸಂಜೆ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು.  ಕೂಡಲೇ ಕಾರ್ಯಪ್ರವೃತ್ತ ರಾಗಿದ್ದ ಪೊಲೀಸರು, ಹೆಚ್ಚಿನ ಅನಾಹುತವಾಗುವು ದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ರಾತ್ರಿ ಹಾಗೂ ಮರು ದಿನವೇ ಕಲ್ಲು ತೂರಾಟ ನಡೆಸಿದವರನ್ನು ಬಂಧಿಸಿದ್ದ ಪೊಲೀಸರು ಅವರ ಮೇಲೆ ಪ್ರಕರಣ ದಾಖಲಿಸಿದ್ದರು.

error: Content is protected !!