ಚನ್ನಗಿರಿ ಉಪ ತಹಶೀಲ್ದಾರ್ ಸುಧಾ ಲೋಕಾಯುಕ್ತರ ಬಲೆಗೆ

ಚನ್ನಗಿರಿ, ಅ.15- ತಾಲ್ಲೂಕಿನ ದೇವರಹಳ್ಳಿ ನಾಡಕಚೇರಿಯ ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಟ್ರ್ಯಾಕ್ಟರ್ ಖರೀದಿಗೆ ದೃಢೀಕರಣ (ಬೋನಾಪೈಡ್‌) ಪತ್ರ ನೀಡಲು 1,500  ರೂ. ಲಂಚ ಪಡೆಯುತ್ತಿದ್ದ ವೇಳೆ ಲಂಚದ ಹಣದ ಸಹಿತ ಅವರನ್ನು ಬಂಧಿಸಲಾಗಿದೆ.

ಹಿರೇಗಂಗೂರು ಗ್ರಾಮದ ರೈತ ಎಸ್‌.ಆರ್‌.ಕುಮಾರ್‌ ಟ್ರ್ಯಾಕ್ಟರ್‌ ಖರೀದಿಗೆ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಪತ್ರದ ಹಸ್ತಾಂತರಕ್ಕೆ ಸುಧಾ 2 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ  500 ರೂ. ಪಡೆದುಕೊಂಡಿದ್ದರು. ಲಂಚ ನೀಡಲು ಇಷ್ಟವಿಲ್ಲದ ಕುಮಾರ್‌, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಲಂಚದ ಉಳಿದ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

error: Content is protected !!