ಮನೆ ಹಾನಿ : ತಹಶೀಲ್ದಾರ್‌ ಪರಿಶೀಲನೆ

ಹೊನ್ನಾಳಿ, ಅ. 14 – ಇದೇ ದಿನಾಂಕ 2ರ ಬುಧವಾರದಿಂದ ಇವತ್ತಿನವರೆಗೆ ಸುರಿದ ಮಳೆಯಿಂದ ಹೊನ್ನಾಳಿ ತಾಲ್ಲೂಕಿನ ಒಟ್ಟು 9 ಮನೆಗಳಿಗೆ ಹಾನಿಯಾಗಿದ್ದು ಇದುವರೆಗೂ ಯಾವುದೇ ಜೀವ ಹಾನಿಯಾಗಿರುವುದಿಲ್ಲವೆಂದು ತಹಶೀಲ್ದಾರ್ ಪಟ್ಟರಾಜೇಗೌಡ ತಿಳಿಸಿದರು.

ತಾಲ್ಲೂಕಿನ ಹನುಮಸಾಗರ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಯಿಂದ ಹಾನಿಯಾದ ದೇವಮ್ಮ ಕೊಂ ನಾಗೇಶಪ್ಪ, ರೇಖಾಭಾಯಿ ಕೋಂ ಮಂಜುನಾಥ ರವರ ಮನೆಗಳನ್ನು ವೀಕ್ಷಿಸಿ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಸೆ.30ರ ಅವಧಿಯಲ್ಲಿ ಮಳೆಹಾನಿ ಪ್ರಮಾಣದ ಗೈಡ್‍ಲೈನ್ ಮುಗಿದ್ದಿದ್ದು. ಹೊಸ ಗೈಡ್‍ಲೈನ್ ಅಡಿ ಪರಿಶೀಲನೆ ನಡೆಸಿ ಸರ್ಕಾರದ ಆದೇಶದ ಮೇರೆಗೆ ಮನೆಯೊಂದಕ್ಕೆ 6500 ರೂ. ಗಳನ್ನು ಕೊಡಬಹುದೆಂದು ತಿಳಿಸಿದರು.

ಭಾನುವಾರ ರಾತ್ರಿ ಹನುಮಸಾಗರ ಗ್ರಾಮದ 1 ಪಕ್ಕಾ ಮತ್ತು 1 ಕಚ್ಚಾ ಮನೆಯು ಮಳೆಗೆ ಹಾನಿಯಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಸುಧೀರ್, ಗ್ರಾಮ ಆಡಳಿತಾಧಿಕಾರಿ ಮುನೇಶ್ ಮತ್ತು ಹನುಮಸಾಗರ ಗ್ರಾ.ಪಂ. ಸದಸ್ಯ ಎಲ್. ಮಂಜಪ್ಪ ಉಪಸ್ಥಿತರಿದ್ದರು.

error: Content is protected !!