ನಗರದಲ್ಲಿ ಇಂದು ವೈದ್ಯರ ನಿರಶನ

ಕೊಲ್ಕೊತ್ತಾದಲ್ಲಿ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕು ಹಾಗೂ ವೈದ್ಯರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಇಂದು ವೈದ್ಯರು ನಿರಶನ ನಡೆಸಲಿದ್ದಾರೆ ಎಂದು ಐ.ಎಂ.ಎ. ಪ್ರಕಟಣೆಯಲ್ಲಿ ತಿಳಿಸಿದೆ.

ಕಿರಿಯ ವೈದ್ಯರ ಹೋರಾಟವನ್ನು ಬೆಂಬಲಿಸಿ ಇಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಿರಶನ ನಡೆಸಲಾಗುವುದು ಎಂದು ಐ.ಎಂ.ಎ. ದಾವಣಗೆರೆ ಶಾಖೆಯ ಅಧ್ಯಕ್ಷ ಡಾ. ಬಿ.ಎಂ. ಹರ್ಷ ಹಾಗೂ ಕಾರ್ಯದರ್ಶಿ ಡಾ. ಇ.ಎಂ. ಸುರೇಂದ್ರ ತಿಳಿಸಿದ್ದಾರೆ. 

ಐ.ಎಂ.ಎ. ದಾವಣಗೆರ ಶಾಖೆಯ ಎಲ್ಲಾ ಸದಸ್ಯರು, ಕಿರಿಯ ವೈದ್ಯರ ಒಕ್ಕೂಟ, ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಮೆಡಿಕಲ್ ಸ್ಟೂಡೆಂಟ್ ನೆಟ್‌ವರ್ಕ್ ಸದಸ್ಯರು ಐ.ಎಂ.ಎ. ಆವರಣದಲ್ಲಿ ನಿರಶನ ನಡೆಸಲಿದ್ದಾರೆ.

error: Content is protected !!