ನಗರದಲ್ಲಿ ಇಂದು ವೀಣಾ ಶಾರದಾಲಂಕಾರ

ಎಸ್.ನಿಜಲಿಂಗಪ್ಪ ಬಡಾವಣೆ ರಿಂಗ್‌ ರಸ್ತೆಯ ಶಾರದಾಂಬಾ ಸರ್ಕಲ್ ಬಳಿ ಇರುವ ಶ್ರೀ ಗಣಪತಿ, ಶ್ರೀ ಶಾರದಾಂಬಾ, ಶ್ರೀ ಚಂದ್ರಮೌಳೀಶ್ವರ ಮತ್ತು ಶ್ರೀ ಶಂಕರಾಚಾರ್ಯರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಇಂದು ವೀಣಾ ಶಾರದಾಲಂಕಾರ ಮಾಡಲಾಗುವುದು. ಬೆಳಿಗ್ಗೆ 8 ಕ್ಕೆ ಸರಸ್ವತೀ ಸೂಕ್ತ ಹೋಮಗಳು, ಸಂಜೆ 5 ರಿಂದ 6 ರವರೆಗೆ ಶಿವನ ಹಾಡುಗಳ ಗಾಯನ, ಸಂಜೆ 6 ಕ್ಕೆ `ಶ್ರೀ ಶಂಕರಾಚಾರ್ಯ ವಿರಚಿತ `ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರ’ ಕುರಿತು ಶಿವಮೊಗ್ಗದ ವಿದ್ವಾನ್ ಎಂ.ಎಸ್. ವಿನಾಯಕ ಉಪನ್ಯಾಸ ನೀಡಲಿದ್ದಾರೆ.

error: Content is protected !!