ನರಗುಂದ – ಗದಗ ಐತಿಹಾಸಿಕ ಪಾದಯಾತ್ರೆಗೆ ಹೊನ್ನಾಳಿ 20 ಸದಸ್ಯರು

 ಹೊನ್ನಾಳಿ, ಸೆ. 18 – ಉತ್ತರ ಕರ್ನಾಟಕ ಜನರ ಜೀವನಾಡಿ, ಕಳಸ ಬಂಡೂರಿ ಹಾಗೂ ಮಹಾದಾಯಿ ನದಿಗಳ ನೀರಿನ ಜೋಡಣೆ ಯೋಜನೆ ಜಾರಿಗೆ ಆಗ್ರಹಿಸಿ ಇಂದಿನಿಂದ ಎರಡು ದಿನ ನರಗುಂದ ತಾಲ್ಲೂಕಿನಿಂದ ಗದಗ ಜಿಲ್ಲೆಯವರೆಗೆ  ಪ್ರವೀಣ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುವ ಐತಿಹಾಸಿಕ ಪಾದಯಾತ್ರೆಗೆ ಹೊನ್ನಾಳಿಯಿಂದ 20 ಜನ ಸದಸ್ಯರು ಪಾಲ್ಗೊಳ್ಳಲಿರುವುದಾಗಿ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಹೊನ್ನಾಳಿ ತಾಲ್ಲೂಕು ಕರವೇ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಘ ಟನೆಯ ರಾಜ್ಯಾಧ್ಯಕ್ಷರು ಕೇಂದ್ರ –  ರಾಜ್ಯ ಸರ್ಕಾರದ ಗಮನಕ್ಕೆ ತರುವ ಕ್ರಾಂತಿ ಕಾರಿ ಹೋರಾಟಕ್ಕೆ ಬೆಂಬಲಿಸಿ ನಾಳೆ ಗುರುವಾರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳ ಲಿದ್ದು ಪಾಲ್ಗೊಳ್ಳಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕರವೇ ಸದಸ್ಯರಾದ ಹರೀಶ್ ಜನನಿ, ಲಕ್ಷ್ಮಿಕಾಂತ್, ಅಣ್ಣಪ್ಪ, ಪ್ರೇಮ್, ಶಿವರಾಜ್, ದರ್ಶನ್, ಪ್ರಶಾಂತ್, ಹಾಲೇಶ್, ಗದ್ದಿಗೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!