ವರದಿಗಾರರ ಕೂಟದ ವಾರ್ಷಿಕ ಮಾಧ್ಯಮ ಪ್ರಶಸ್ತಿಗೆ ಆಯ್ಕೆ

ವರದಿಗಾರರ ಕೂಟದ ವಾರ್ಷಿಕ ಮಾಧ್ಯಮ ಪ್ರಶಸ್ತಿಗೆ ಆಯ್ಕೆ

ದಾವಣಗೆರೆ, ಆ. 26 –  ಜಿಲ್ಲಾ ವರದಿಗಾರರ ಕೂಟದಿಂದ ಕೊಡಮಾಡುವ ವಾರ್ಷಿಕ ಮಾಧ್ಯಮ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಮಾಧ್ಯಮ ರಂಗದಲ್ಲಿ ಸೇವೆ ಸಲ್ಲಿಸಿದ 8 ಜನ ಪತ್ರಕರ್ತರು ಭಾಜನರಾಗಿದ್ದಾರೆ.

ಗಣೇಶ ಕಮಲಾಪುರ (ವಿಜಯವಾಣಿ), ವಿನಾಯಕ ನಾಯ್ಕ ಪೂಜಾರಿ (ವಿಜಯ ಕರ್ನಾಟಕ), ದೇವಿಕಾ ಸುನೀಲ್ (ಕನ್ನಡ ಭಾರತಿ), ಕೆ.ಆರ್. ಪುನೀತ್ ಆಪ್ತಿ (ಪಬ್ಲಿಕ್ ಟಿವಿ), ಬಿ. ಹನುಮಂತರಾವ್ (ಒನ್ ಕನ್ನಡ), ಹೆಚ್. ನಿಂಗರಾಜ್ (ದಾವಣಗೆರೆ ಶಿವ), ಚನ್ನಬಸವ ಶೀಲವಂತ (ಕನ್ನಡಪ್ರಭ), ಎ.ಬಿ. ರುದ್ರಮ್ಮ (ಕ್ರಾಂತಿ ಕೇಸರಿ)  ಅವರುಗಳನ್ನು `ಮಾಧ್ಯಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ದಾವಣಗೆರೆ ಪತ್ರಿಕೋದ್ಯಮದಲ್ಲಿ ದಶಕಗಳ ಕಾಲ ಕಾರ್ಯ ನಿರ್ವಹಿಸಿ ಸೇವೆ ಸಲ್ಲಿಸಿದ ಎಂಟು ಜನ ಹಿರಿಯ ಪತ್ರಕರ್ತರಿಗೂ ಈ ಬಾರಿ ಜೀವಮಾನ ಸಾಧನೆಗಾಗಿ ಗೌರವ ಸನ್ಮಾನ ನಡೆಯಲಿದೆ. 

ವೀರಪ್ಪ ಎಂ. ಬಾವಿ (ಇಂದಿನ ಸುದ್ದಿ), ಎನ್.ಆರ್. ನಟರಾಜ್ (ಉದಯವಾಣಿ), ಜಿ.ಎಂ.ಆರ್. ಆರಾಧ್ಯ (ಜನಮಿಡಿತ), ಎಂ. ಶಶಿಕುಮಾರ್ (ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್), ಎಸ್.ಎ. ಗಂಗರಾಜು (ಟೈಮ್ಸ್ ಆಫ್ ಇಂಡಿಯಾ), ಐ. ಗುರುಶಾಂತಪ್ಪ (ಮಲ್ನಾಡವಾಣಿ), ಬಸವರಾಜ್ ಐರಣಿ (ಮಲ್ನಾಡವಾಣಿ), ಬಕ್ಕೇಶ್ ನಾಗನೂರು (ಹಿರಿಯ ಪತ್ರಕರ್ತ) ಅವರುಗಳು ಗೌರವ ಸನ್ಮಾನಕ್ಕೆ ಭಾಜನರಾಗಿದ್ದಾರೆ.

ಪ್ರಶಸ್ತಿ, ಸನ್ಮಾನಕ್ಕೆ ಆಯ್ಕೆಯಾದ ಇವರೆಲ್ಲರಿಗೂ ವರದಿಗಾರರ ಕೂಟದಿಂದ ಇದೇ ದಿನಾಂಕ 31ರಂದು ಬೆಳಿಗ್ಗೆ 11ಕ್ಕೆ ನಡೆಯುವ ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಗುವುದು ಎಂದು
ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್‌, ಖಜಾಂಚಿ ಪವನ್ ಐರಣಿ, ಪಿಆರ್ ಓ ಪಿ.ಎಸ್.ಲೋಕೇಶ ತಿಳಿಸಿದ್ದಾರೆ.

error: Content is protected !!