ಇಸ್ಕಾನ್ : ನಗರದಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ

ಅಂತರರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್) ದಾವಣಗೆರೆ ಘಟಕದ ವತಿಯಿಂದ ಇಂದು ಮತ್ತು ನಾಳೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ‌ ಎಂದು ಇಸ್ಕಾನ್ ಮುಖ್ಯಸ್ಥ  ಅವಧೂತ ಚಂದ್ರದಾಸ ಅವರು ತಿಳಿಸಿದರು.

ವಿನೋಬನಗರದ ಅರ್ಬನ್ ಬ್ಯಾಂಕ್ ಸಮುದಾಯ‌ ಭವನದಲ್ಲಿ ಇಂದು ಸಂಜೆ 5 ರಿಂದ ರಾತ್ರಿ 12ರವರೆಗೆ ಮಂಗಳಾರತಿ, ಭಜನೆ, ಅಭಿಷೇಕ, ನೃತ್ಯ ರೂಪಕ, ಪ್ರವಚನ, ಮಹಾಮಂಗಳಾರತಿ ನಂತರ ಪ್ರಸಾದ ಇರಲಿದೆ‌ ಎಂದರು‌. ನಾಳೆ ಮಂಗಳವಾರ ಬೆಳಿಗ್ಗೆ 10.30‌ರಿಂದ ಮಧ್ಯಾಹ್ನ 1 ಗಂಟೆವರೆಗೆ ಶ್ರೀ ಪ್ರಭುಪಾದರ ವ್ಯಾಸ ಪೂಜಾ ಮಹೋತ್ಸವ ನಡೆಯಲಿದೆ‌.

error: Content is protected !!