ನಗರದಲ್ಲಿ ಇಂದು ನಿವೃತ್ತ ನೌಕರರ ಸಭೆ

ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆ ಇವರ ವತಿಯಿಂದ ಗುರುಭವನದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಮಟ್ಟದ ನಿವೃತ್ತ ನೌಕರರ ಸಭೆ ನಡೆಯಲಿದೆ.

ನಿವೃತ್ತ ನೌಕರರಿಗೆ ಏಳನೇ ವೇತನ ಆಯೋಗದ ವರದಿಯಲ್ಲಿ ಆಗಿರುವ ಅನ್ಯಾಯದ ಬಗ್ಗೆ ಸರ್ಕಾರದ ಗಮನಸೆಳೆಯಲು ಹೋರಾಟ ಮಾಡುವ ಬಹುಮುಖ್ಯ ನಿರ್ಧಾರವನ್ನು ಈ ಸಭೆಯಲ್ಲಿ ಕೈಗೊಳ್ಳಲಾಗುವುದು. 

ಸಭೆಯಲ್ಲಿ ವೇದಿಕೆ ರಾಜ್ಯ ಪ್ರಧಾನ ಸಂಚಾಲಕ ಎಂ.ಪಿ.ಎಂ. ಷಣ್ಮುಖಯ್ಯ, ರಾಜ್ಯ ಸಂಚಾಲಕ ಕೆ. ಶಿವಶಂಕರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. 

error: Content is protected !!