ನಗರದಲ್ಲಿ ಇಂದು ಗೀತೆಗಳ ಗಾಯನ ಸ್ಪರ್ಧೆ

ಕೆ.ಬಿ. ಬಡಾವಣೆಯ ಐಕ್ಯತಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಂತಿಪಾರ್ಕ್ ಸಭಾಂಗಣದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಮಧ್ಯ ಕರ್ನಾಟಕದ ಧ್ವನಿ ಕರೋಕೆ ಗಾಯನ ಮೆಗಾ ಆಡಿಷನ್, ದೇಶಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ ಹಾಗೂ ಕನ್ನಡ ಮತ್ತು ಹಿಂದಿನ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ, ಸಂಜೆ 6.30 ಕ್ಕೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಲಿದ್ದು, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೆ.ಎಸ್.ಬಸವಂತಪ್ಪ, ಜಿ ಮಹಮದ್ ಸಮೀವುಲ್ಲಾ, ಬಿ.ಜಿ. ಅಜಯ್ ಕುಮಾರ್, ದೇವರಮನಿ ಶಿವಕುಮಾರ್, ಬಿ. ನಾಗಪ್ಪ, ಜಿ.ಎಸ್. ಶ್ಯಾಮ್, ಇಬ್ರಾಹಿಂ ಎ. ತಿಮ್ಮಾಪುರ, ಸುರೇಶ್ ರಾಯಭಾಗ್, ಸಾಧತ್, ಜೆ ಜೆ. ಅಮಾನುಲ್ಲಾಖಾನ್, ಟಾರ್ಗೆಟ್ ಅಸ್ಲಾಂ, ಪಿ. ಕುಮಾರ್, ವೀರೇಶ್ ಸವಣೂರು, ವಿ. ಸೋಮಶೇಖರ್, ಬಿ.ಎಂ.ಸಿ. ರಾಜು, ರವಿಕುಮಾರ್, ಡಾ.ಅನೀಸ್ ಅಹ್ಮದ್, ಫಾರೂಖ್, ವಿಜಯಣ್ಣ, ರಂಗಸ್ವಾಮಿ, ಅಹ್ಮದ್ ಶರೀಫ್, ಸಿದ್ಧೇಶ್ ಪಾಮೇನಹಳ್ಳಿ, ಅಮೀರ್, ಕರಿಯಪ್ಪ ಭಾಗವಹಿಸಲಿದ್ದಾರೆ. 

error: Content is protected !!