ಮೆಕ್ಕೇಜೋಳಕ್ಕೆ ಲದ್ದಿಹುಳು ಭಾದೆ ಕೀಟನಾಶಕ ಬಳಸಲು ಕೃಷಿ ಇಲಾಖೆ ಸಲಹೆ

ದಾವಣಗೆರೆ, ಆ. 5 – ಜಿಲ್ಲೆಯಲ್ಲಿ ಮೆಕ್ಕೆಜೋಳದ ಬೆಳೆಗೆ ಸೈನಿಕ ಹುಳಗಳ ಬಾಧೆ ಹೆಚ್ಚಳವಾಗಿದ್ದು, ನಿರ್ವಹಣೆಗೆ ಇಮಾಮ್ಯಾಕ್ಟಿನ್ ಬೆಂಜೋಯೇಟ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಅರ್ಧ ಗ್ರಾಂ ಬೆರೆಸಿ ಸುಳಿಯಲ್ಲಿ ತುಂಬುವಂತೆ ಸಿಂಪರಣೆ ಮಾಡಲು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಕೀಟ ನಾಶಕವು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಪರವಾನಿಗೆ ಪಡೆದ ಅಧಿಕೃತ ಕೃಷಿ ಪರಿಕರ ಮಾರಾಟಗಾರರಲ್ಲಿ ಕೂಡ ಲಭ್ಯವಿರುತ್ತದೆ ಎಂದು ಅವರು ತಿಳಿಸಿದ್ದಾರೆ.

error: Content is protected !!