ದಾವಣಗೆರೆ, ಆ. 2- ನಗರದ ದೊಡ್ಡಪೇಟೆಯಲ್ಲಿರುವ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನ ದಲ್ಲಿ ನಾಗರ ಅಮಾವಾಸ್ಯೆ ಪ್ರಯುಕ್ತ ನಾಡಿದ್ದು ದಿನಾಂಕ 4ರಂದು ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಹೂವಿನ ಅಲಂಕಾರ ನಡೆಯಲಿದೆ. ನಂತರ ಮಧ್ಯಾಹ್ನ 12.30ಕ್ಕೆ ಸರ್ವ ಭಕ್ತಾದಿಗಳಿಗೆ ದಾಸೋಹ ಏರ್ಪ ಡಿಸಲಾಗಿದೆ. ಗೌಡ್ರ ಜಯದೇವಪ್ಪ ಮತ್ತು ಮಕ್ಕಳು, ಕೆ.ಎಂ. ರವಿಶಂಕರ್ ಮತ್ತು ಮಕ್ಕಳು, ರವಿ ಬೆಣ್ಣೆ ದೋಸೆ ಹೋಟೆಲ್, ಕರಿಬಸವರಾಜು ಮುಂಡ ರಗಿ ಮತ್ತು ಮಕ್ಕಳು, ದಾವಣಗೆರೆ. ಶ್ರೀಮತಿ ಶೋಭಾ ಹಾಲೇಶಪ್ಪ, ಮಕ್ಕಳು, ಸೊಸೆಯಂದಿರು, ಹೆಮ್ಮನಬೇತೂರು ಇವರು ದಾಸೋಹದ ಸೇವಾರ್ಥಿಗಳಾಗಿದ್ದಾರೆ.
ಶ್ರೀ ದಾನಮ್ಮ ದೇವಸ್ಥಾನದಲ್ಲಿ ನಾಳೆ ನಾಗರ ಅಮಾವಾಸ್ಯೆ
