ಹರಿಹರದಲ್ಲಿ ಹಡಪದ ಅಪ್ಪಣ್ಣ ಜಯಂತಿ

ಹರಿಹರ, ಜು. 25 – ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ದಾರ್ಶನಿಕ ಹಡಪದ ಅಪ್ಪಣ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಶಾಸಕ ಬಿ.ಪಿ. ಹರೀಶ್ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಹಡಪದ ಅಪ್ಪಣ್ಣ ನವರು ನಾಡಿನ ಒಳಿತಿಗಾಗಿ ಕೊಟ್ಟಂತಹ ಕೊಡುಗೆ ಮತ್ತು ಅವರಲ್ಲಿದ್ದ ಆದರ್ಶ, ತತ್ವಗಳನ್ನು ಹಿಂದಿನ ಯುವಕರು ಮೈಗೂಡಿಸಿಕೊಂಡು ಹೋಗುವಂತೆ ಹೇಳಿದರು.

ಈ ಸಂದರ್ಭದಲ್ಲಿ ಗ್ರೇಡ್2 ತಹಶೀಲ್ದಾರ್ ಶಶಿಧರಯ್ಯ, ಹಡಪದ ಅಪ್ಪಣ್ಣ ಸಮಾಜದ ಮುಖಂಡ ಕೆ. ಉಮಾಪತಿ ನಂದಿಗಾವಿ, ಕೆ.ಎಸ್. ಮಂಜಪ್ಪ, ಹಾಲೇಶ್, ಕೆ. ತಿಪ್ಪೇಸ್ವಾಮಿ, ಕೆ. ಲೋಕೇಶ್ ಜಿಗಳಿ, ಕೆ. ಬೀರಪ್ಪ, ಕೆ. ಶೇಖರಪ್ಪ ಭಾನುವಳ್ಳಿ, ಹನುಮಂತಪ್ಪ ಕೊಕ್ಕನೂರು, ಹರಿಹರ ಶಿವಮೂರ್ತಿ, ಹಾಲೇಶ್ ಹಡಪದ, ಕೆ.ಟಿ‌. ಕೊಟ್ರೇಶ್ ನಂದಿಗಾವಿ, ಮಹಾಂತೇಶ್, ಮಲ್ಲಪ್ಪ, ಕೆ.ಸಿ. ಸತೀಶಕುಮಾರ್, ಲೋಕೇಶ್ ತಾಲ್ಲೂಕು ಆಡಳಿತದ ಸಂತೋಷ, ಶಿಕ್ಷಣ ಇಲಾಖೆಯ ಬಸವರಾಜಯ್ಯ ಇತರರು ಹಾಜರಿದ್ದರು. 

error: Content is protected !!