ದಾವಣಗೆರೆ, ಜು. 25 – ಭಗತ್ ಸಿಂಗ್ ನಗರದ ಅಂಜುಮನ್ ಶಾಲೆ ಬಳಿ ಬುಧವಾರ ರಾತ್ರಿ 11.15ರ ವೇಳೆ ವ್ಯಕ್ತಿಯೊಬ್ಬರ ಸುಲಿಗೆ ನಡೆದಿದ್ದು, ತಲೆ ಮೇಲೆ ಕಲ್ಲು ಹಾಕಿ ಕೊಲೆಗೂ ಯತ್ನಿಸಲಾಗಿದೆ. ಈ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತರಳಬಾಳು ಬಡಾವಣೆ ನಿವಾಸಿ ಹೋಟೆಲ್ ವ್ಯಾಪಾರಿ ಎಂ.ಡಿ. ಶಿವಕುಮಾರ್ (52) ಸ್ನೇಹಿತನ ಮನೆಯಲ್ಲಿ ಊಟ ಮುಗಿಸಿಕೊಂಡು ಭಗತ್ ಸಿಂಗ್ ನಗರದ ಅಂಜುಮನ್ ಶಾಲೆ ಹತ್ತಿರ ಹೋಗುತ್ತಿರುವಗ ಮೂರು ಜನ ಹುಡುಗರ ಪೈಕಿ ಓರ್ವ ಏಕಾ ಏಕಿ ಮುಖಕ್ಕೆ ಗುದ್ದಿದ್ದು, ಮೂಗಿನಿಂದ ರಕ್ತ ಸುರಿಯಲಾ ರಂಭಿಸಿದೆ. ಆಗ ಶಿವಕುಮಾರ್ ಅವರ ಕೊರಳಿಗೆ ಕೈ ಹಾಕಿ ಬಂಗಾರದ ಸರ ಕಿತ್ತುಕೊಳ್ಳಲು ಓರ್ವ ಯತ್ನಿಸಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇಬ್ಬರು ಹುಡುಗರು ಅಲ್ಲಿಯೇ ಬಿದ್ದಿದ್ದ ದೊಡ್ಡ ಕಲ್ಲು ಎತ್ತಿ ಕೊಂಡು ತನ್ನ ಮೇಲೆ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಓರ್ವ ಕೊರಳಲ್ಲಿದ್ದ ಬಂಗಾರದ ಸರ ಕಿತ್ತುಕೊಂಡಿದ್ದಾನೆ. ಬಂಗಾರದ ಸರ 1.65 ಲಕ್ಷ ರೂ. ಮೌಲ್ಯದ್ದಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.
ನಿನ್ನೆಯಷ್ಟೇ ಭಗತ್ ಸಿಂಗ್ ನಗರದಲ್ಲಿ ಪೊಲೀಸ್ ಕ್ವಾರ್ಟ್ರಸ್ ಹಿಂಭಾಗವೇ ಮನೆಯೊಂದರಲ್ಲಿ ಕಳ್ಳತ ನವಾದ ಪ್ರಕರಣ ವರದಿಯಾ ಗಿತ್ತು. ಇದೀಗ ರಾತ್ರಿ 11.15ರ ವೇಳೆಯೇ ಕೆಟಿಜೆ ನಗರ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ ಪ್ರಕರಣ ನಡೆದಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.