ಪ್ರಾಧ್ಯಾಪಕ ಸೀತಾರಾಮ್ ನಿಧನ ವಿದ್ಯಾರ್ಥಿಗಳಿಂದ ಶ್ರದ್ಧಾಂಜಲಿ

ಪ್ರಾಧ್ಯಾಪಕ ಸೀತಾರಾಮ್ ನಿಧನ ವಿದ್ಯಾರ್ಥಿಗಳಿಂದ ಶ್ರದ್ಧಾಂಜಲಿ

ಜಗಳೂರು, ಜು. 24 – ಪಟ್ಟಣದ ಹೋ.ಚಿ. ಬೋರಯ್ಯ ಸ್ಮಾರಕ  ಪ್ರಥಮ ದರ್ಜೆ ಕಾಲೇಜಿನ ವೃತ್ತಿ ನಿರತ ಇಂಗ್ಲಿಷ್ ವಿಭಾಗದ ಮುಖ್ಯಸ್ಥ  ಜೆ.ಎ. ಸೀತಾರಾಮ್ (58) ಅವರು ಅಕಾಲಿಕ ನಿಧನರಾಗಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಉತ್ತಮ ಒಡನಾಟ, ಸದಾ ಹಸನ್ಮುಖಿಯಾಗಿದ್ದ ಅವರು, ಕಳೆದ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 

ದೈಹಿಕ ಶಿಕ್ಷಣ ನಿರ್ದೇಶಕ ಓ. ಮಧು, ಉಪನ್ಯಾಸಕ ತಿಮ್ಲಾಪುರ ಪ್ರಸಾದ್, ಉಪನ್ಯಾಸಕ ಸುರೇಶ್, ಮಂಜುನಾಥ್, ಅಶೋಕ ಕುಮಾರ್, ಮಹೇಶ್, ಬಾಬು, ಎಂ.ರಾಜಪ್ಪ, ಮಾದಿಹಳ್ಳಿ ಮಂಜುನಾಥ್, ಮುಖಂಡ ಮರೇನಹಳ್ಳಿ ನಾಗರಾಜ್, ಗುರುರಾಜ್, ಧನ್ಯಕುಮಾರ್‌ ಎಚ್.ಎಂ. ಹೊಳೆ, ಮಹಾಂತೇಶ್, ಬ್ರಹ್ಮಮಾರುತಿ, ಅಂಜಿನಪ್ಪ, ವಿಜಯ್ ಕೆಂಚೋಳ್ ಸೇರಿದಂತೆ ವಿದ್ಯಾರ್ಥಿಗಳು  ಇಂದು ಪಟ್ಟಣದ ಗಾಂಧಿ ವೃತದಲ್ಲಿ ಸೀತಾ ರಾಮು ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮೌನಾಚರಣೆಯೊಂದಿಗೆ ಶ್ರದ್ದಾಂಜಲಿ ಸಲ್ಲಿಸಿದರು.

error: Content is protected !!